Advertisement

11 ಎಐಎಡಿಎಂಕೆ ಶಾಸಕರ ಅನರ್ಹತೆ: ಸುಪ್ರೀಂ ತುರ್ತು ವಿಚಾರಣೆಗೆ ಡಿಎಂಕೆ ಮನವಿ

10:03 AM Jul 03, 2019 | Sathish malya |

ಹೊಸದಿಲ್ಲಿ : ತಮಿಳು ನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ವಿರುದ್ಧ 2017ರ ವಿಶ್ವಾಸ ಮತ ಗೊತ್ತುವಳಿಯ ವೇಳೆ ವಿರುದ್ಧ ಮತ ಹಾಕಿದ್ದ 11 ಎಐಎಡಿಎಂಕೆ ಶಾಸಕರನ್ನು ಅನರ್ಹಗೊಳಿಸಬೇಕೆಂಬ ತನ್ನ ಮನವಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕೆಂದು ಡಿಎಂಕೆ ಇಂದು ಮಂಗಳವಾರ ಸುಪ್ರಿಂ ಕೋರ್ಟನ್ನು ಒತ್ತಾಯಿಸಿತು.

Advertisement

ಇದಕ್ಕೆ ಉತ್ತರವಾಗಿ ವರಿಷ್ಠ ನಾಯ್ಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠವು ಉಪ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಸಹಿತ ಶಾಸಕರ ಅನರ್ಹತೆಯನ್ನು ಕೋರಿರುವ ಡಿಎಂಕೆ ಮನವಿಯನ್ನು ತುರ್ತು ವಿಚಾರಣೆ ಪಟ್ಟಿಗೆ ಸೇರಿಸುವಂತೆ ಸೂಚಿಸುವುದಾಗಿ ಹೇಳಿತು.

ಕಳೆದ ವರ್ಷ ಎಪ್ರಿಲ್‌ ನಲ್ಲಿ ಮದ್ರಾಸ್‌ ಹೈಕೋರ್ಟ್‌ ಎಐಎಡಿಎಂಕೆಯ 11 ಶಾಸಕರನ್ನು ಅನರ್ಹಗೊಳಿಸಬೇಕೆಂಬ ಡಿಎಂಕೆ ಮನವಿಯನ್ನು ತಿರಸ್ಕರಿಸಿತ್ತು.

ಪನ್ನೀರಸೆಲ್ವಂ ಮತ್ತು ಇತರ 10 ಶಾಸಕರು ಅಂದು ಬಂಡುಕೋರ ಬಣದ್ಲಿದ್ದರು. 2017ರ ಫೆ.18ರ ವಿಶ್ವಾಸಮತ ಗೊತ್ತುವಳಿಯಲ್ಲಿ ಇವರು ಪಳನಿಸ್ವಾಮಿ ವಿರುದ್ಧ ವಿಶ್ವಾಸ ಮತ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next