Advertisement

ಬಡ ಕುಟುಂಬಗಳಿಗೆ ದಿನಸಿ ವಿತರಣೆ

01:04 PM May 03, 2020 | Suhan S |

ಬನಹಟ್ಟಿ: ಶ್ರೀ ದೇವರ ದಾಸಿಮಯ್ಯ ಗೆಳೆಯರ ಬಳಗ ಖೀಳೇಗಾವ ಬಸವೇಶ್ವರ ದೇವಸ್ಥಾನ ನೀರಿನ ಟಾಕಿ ಹತ್ತಿರ ಇರುವ ಸುಮಾರು 25 ಬಡ ಕುಟುಂಬಗಳಿಗೆ ದಿನನಿತ್ಯದ ಕಿರಾಣಿ ವಸ್ತುಗಳನ್ನು ಕೊಡುವ ಮೂಲಕ ಜೀವನ ನಿರ್ವಹಣೆಗೆ ನೆರವು ನೀಡಿದರು.

Advertisement

ಕೆಲಸವಿಲ್ಲದೇ ಕಷ್ಟದಲ್ಲಿದ್ದ ಬಡ ಕುಟುಂಬಗಳಿಗೆ ದಿನಸಿ ವಸ್ತುಗಳು ಹಾಗೂ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ ಎಂದು ಬಳಗದ ಶಿವಕುಮಾರ ಜುಂಜಪ್ಪನವರ ಹೇಳಿದರು. ಗೆಳೆಯರ ಬಳಗದ ಸದಾಶಿವ ತಟಕೋಟ, ಮಹಾಂತೇಶ ಕದ್ದಿಮನಿ, ಸಂಜಯ ಮಹಾಜನ, ಚಿನ್ನಪ್ಪ ಕರಲಟ್ಟಿ, ಪ್ರಕಾಶ ಅಥಣಿ, ಸೋಮಶೇಖರ ಬೆಳ್ಳುಬ್ಬಿ, ಮಹಾಲಿಂಗ ಕಿತ್ತೂರ, ಮಹಾಂತೇಶ ಕದ್ದಿಮಣಿ, ಮಹಾದೇವ ನುಚ್ಚಿ, ಸಿದ್ದು ಬಾಣಕಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next