Advertisement

ಈಗಲಾದರೂ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ : ಪಿ.ರಾಜೀವ್

11:36 AM Mar 10, 2022 | Team Udayavani |

ಬೆಂಗಳೂರು : ಕಾಂಗ್ರೆಸ್ ಪಕ್ಷವನ್ನು ಈಗಲಾದರೂ ವಿಸರ್ಜನೆ ಮಾಡಬೇಕು ಎಂದು ಬಿಜೆಪಿ ವಕ್ತಾರ, ಶಾಸಕ ಪಿ.ರಾಜೀವ್ ಅಭಿಪ್ರಾಯಪಟ್ಟಿದ್ದಾರೆ.

Advertisement

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿಸರ್ಜನೆ ಮಾಡುವ ಬಗ್ಗೆ ಗಾಂಧೀಜಿ ಅಂದೇ ಹೇಳಿದ್ದರು.ಆದರೆ ಅಂದು ಗಾಂಧೀಜಿಯವರ ಮಾತನ್ನು ಕಾಂಗ್ರೆಸ್ ಕೇಳಿರಲಿಲ್ಲ. ಹೀಗಾಗಿ ಈಗಾದರೂ ಪಕ್ಷ ವಿಸರ್ಜನೆ ಮಾಡಿ ಎಂದು ಹೇಳಿದರು.

ಈ ನೆಲದ ಸಂಸ್ಕ್ರತಿಯ ಪ್ರತೀಕ ಮೋದಿ.ಬಿಜೆಪಿ ಪ್ರಚಂಡ ಗೆಲುವು ದಾಖಲಿಸಿದೆ.ಪಂಜಾಬ್ ಲ್ಲಿ ಆಪ್ ಮುನ್ನಡೆ ಇದೆಮುಂದಿನ ದಿನಗಳಲ್ಲಿ ಪಂಜಾಬ್ ಜನತೆ ಬಿಜೆಪಿ ಮತ ಹಾಕಿಲ್ವಲ್ಲ ಎಂದು ಪಶ್ಚಾತ್ತಾಪ ಪಡ್ತಾರೆ ಎಂದು ಅಭಿಪ್ರಾಯ ಪಟ್ಟರು.

ಆಪ್ ಒಂದಿಷ್ಟು ಯೋಜನೆಯ ಹೆಸರನ್ನು ತಿರುಚಿ ಅಧಿಕಾರಕ್ಕೆ ಬರ್ತಾ ಇದೆ.ಯುಪಿ ಚುನಾವಣೆ ಜವಾಬ್ದಾರಿ ಕರ್ನಾಟಕದವರು ಹೊತ್ತಿದ್ದರು.ಶೋಭಾ ಕರಂದ್ಲಾಜೆ‌ ಸಹ ಉಸ್ತುವಾರಿಯಾಗಿದ್ದರು ಎಂದರು. ಯೋಗಿ ಆದಿತ್ಯನಾಥ್ , ಮೋದಿ ಇಬ್ಬರು ಜೋಡಿ ಜನರ ಮೋಡಿ ಮಾಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next