Advertisement

ಕಡತ ವಿಲೇವಾರಿಗೆ ನಿರಾಸಕ್ತಿ

03:05 PM Nov 23, 2018 | |

ಚಿತ್ರದುರ್ಗ: ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟು ಪರಕೀಯರಿಂದ ಅಹಿಂಸಾತ್ಮಕ ಹೋರಾಟದ ಮೂಲಕ ಸ್ವಾತಂತ್ರ್ಯಾ ತಂದು ಕೊಟ್ಟ ಮಹಾನ್‌ ವ್ಯಕ್ತಿ ಮಹಾತ್ಮ ಗಾಂಧೀಜಿ ಎಂದು ಸಂಸದ ಬಿ.ಎನ್‌. ಚಂದ್ರಪ್ಪ ಹೇಳಿದರು.

Advertisement

ನಗರದ ತರಾಸು ರಂಗ ಮಂದಿರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ “ಪಾಪು ಬಾಪು’ ಗಾಂಧಿ ರಂಗಪಯಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿ ಯವರ ಬಾಲ್ಯಾವಸ್ಥೆಯಲ್ಲಿ ಭಾರತೀಯ ಸಂಸ್ಕೃತಿ ವಿಶೇಷವಾಗಿ ಶ್ರವಣ ಮತ್ತು ಹರಿಶ್ಚಂದ್ರ ಮಹಾರಾಜರ ಕಥೆಗಳು ಪ್ರಭಾವ ಬೀರಿದವು. ಧರ್ಮ, ಸತ್ಯ, ಪ್ರಮಾಣಿಕತೆಯೊಂದಿಗೆ ಸರಳ ಜೀವನ ನಡೆಸುವುದನ್ನು ರೂಢಿಸಿಕೊಂಡರು. ಸತ್ಯ ಹರಿಶ್ಚಂದ್ರನ ಕಥೆ ಬಾಲಕ ಗಾಂಧಿಯ ಮನವನ್ನು ಪದೇ ಪದೇ ಕಾಡುತ್ತಿತ್ತು. ಅದು ತಮ್ಮ ಮನದಲ್ಲಿ ಅಳಿಸಲಾಗದ ಛಾಪು ಒತ್ತಿತೆಂದು ಗಾಂಧೀಜಿ ಯವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಆ ಕಥೆ ನನ್ನನ್ನು ಸದಾ ಕಾಡಿಸಿದ ಪರಿಣಾಮ ಎಷ್ಟೋ ಬಾರಿ ಹರೀಶ್ಚಂದ್ರನಂತೆ ವರ್ತಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಸತ್ಯ ಮತ್ತು ಪ್ರೇಮದಂತಹ ಸರ್ವೋತ್ಛ ಮೌಲ್ಯಗಳೊಂದಿಗೆ ಗಾಂಧೀಜಿಯವರು ಗುರುತಿಸಿಕೊಂಡಿದ್ದರಿಂದ ಅವರಿಂದ
ಮಹಾನ್‌ ಸಾಧನೆ ಸಾಧ್ಯವಾಗಿದೆ ಎಂದರು. ಸರಳವಾಗಿ ಬದುಕಿದ ಗಾಂಧೀಜಿ, ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕು, ಪರರ ಮೇಲೆ ಅವಲಂಬನೆ ಬಿಟ್ಟು ಸ್ವತಂತ್ರ ಬದುಕು ಕಟ್ಟಿಕೊಳ್ಳಿ ಎಂಬ ಸಂದೇಶ ನೀಡಿದ್ದಾರೆ. ಮಕ್ಕಳು ತಮ್ಮ ಚಿಕ್ಕ ವಯಸ್ಸಿನಲ್ಲಿ ಗಾಂಧಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೆ ಇಂದಿನ ದಿನಗಳಲ್ಲಿ ಗಾಂಧೀಜಿಯವರ ಮಹತ್ವ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.

ಗಾಂಧೀಜಿಯವರ ಉತ್ತಮ ವ್ಯಕ್ತಿತ್ವ ಹಾಗೂ ಸರಳ ಜೀವನ ಶೈಲಿಯನ್ನು ಜನರು ಹಾಸ್ಯ ಮಾಡುತ್ತಿರುವುದು ಮನಸ್ಸಿಗೆ
ನೋವುಂಟು ಮಾಡುತ್ತದೆ. ಭ್ರಷ್ಟಾಚಾರ ವಿರೋಧ ಮಾಡುವವರು ಮೊದಲು ಸರಿಯಾಗಿ ಇರಬೇಕು. ಇಲ್ಲದೇ ಹೋದರೆ “ಮಾಡುವುದು ಆಚಾರ ಮನೆ ಮುಂದೆ ಬೃಂದಾವನ’ ಎಂಬ ಗಾದೆ ನೆನಪಾಗುತ್ತದೆ ಎಂದರು.

Advertisement

ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿಯವರಿಗೆ ಎರಡು ಬಾರಿ ಪ್ರಧಾನಮಂತ್ರಿ ಆಗುವ ಯೋಗ ಒದಗಿ ಬಂದಿತ್ತು. ಆದರೆ ಅದನ್ನು ನಯವಾಗಿ ತಿರಸ್ಕರಿಸಿದ ಅವರು ದೇಶದ ಶ್ರೇಷ್ಠ ಆರ್ಥಿಕ ತಜ್ಞ ಡಾ| ಮನಮೋಹನ ಸಿಂಗ್‌ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಇಂದು ಗ್ರಾಮ ಪಂಚಾಯತ್‌ ಅಧ್ಯಕ್ಷ ಹುದ್ದೆಯನ್ನೇ ಬಿಡಲು ಸಿದ್ಧರಿಲ್ಲದೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಇತಿಹಾಸ ಸಂಶೋಧಕ ಡಾ| ಬಿ. ರಾಜಶೇಖರಪ್ಪ, ವಾರ್ತಾಧಿಕಾರಿ ಧನಂಜಯಪ್ಪ ಮತ್ತಿತರರು ಇದ್ದರು.

ಕೊನೇ ದಿನ ಜಾಸ್ತಿ “ಕಡತ ವಿಲೇವಾರಿ ಸಪ್ತಾಹ’ ನವೆಂಬರ್‌ 13 ರಿಂದ 18ರವರೆಗೆ ನಡೆದಿದ್ದು, ನ. 13 ಮತ್ತು 14 ರಂದು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಶೂನ್ಯ ಸಾಧನೆ ಮಾಡಲಾಗಿದೆ. 15 ರಂದು 883 ಕಡತ, 16 ರಂದು 1113 ಕಡತ, 17 ರಂದು 885 ಕಡತ, ಕೊನೆ ದಿನವಾದ ನ. 18 ರಂದು 2034 ಕಡತಗಳ ವಿಲೇ ಮಾಡಲಾಗಿದೆ.

ಪ್ರತಿ ದಿನ ಬೆಳಿಗ್ಗೆ 9 ಗಂಟೆಗೆ ಸಿಬ್ಬಂದಿಗಳು ಆಗಮಿಸಿ ಕೆಲಸ ಮಾಡಿ ಬಾಕಿ ಕಡತಗಳ ವಿಲೇ ಮಾಡಿದ್ದಾರೆ. ಕೆಲವು ಕಡತಗಳು ನ್ಯಾಯಾಲಯದಲ್ಲಿವೆ. ಸರ್ವೆ ಇಲಾಖೆಯಲ್ಲಿ ಬಹಳ ದಿನಗಳಿಂದ ಕಡತಗಳು ಬಾಕಿ ಇವೆ. ಕಡತ ವಿಲೇವಾರಿ ಸಪ್ತಾಹದ ಹೊರತಾಗಿಯೂ ಕಡತಗಳನ್ನು ಬಾಕಿ ಉಳಿಸಬೇಡಿ ಎಂದು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
 ಆರ್‌. ಗಿರೀಶ್‌, ಜಿಲ್ಲಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next