Advertisement

ನಿಧಿ ಆಸೆ!ಮಾಲಿಕನನ್ನು ಕಟ್ಟಿಹಾಕಿ ಅಗೆದು ಅಗೆದು ಬರಿಗೈಯಲ್ಲಿ ವಾಪಸ್!

09:48 AM Jan 24, 2017 | Team Udayavani |

ವಿಟ್ಲ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪ್ಪಾಡಿ  ಎಂಬಲ್ಲಿ ನಿಧಿ ಇದೆ ಎಂದು ಮನೆಯ ಮಾಲಿಕರೊಬ್ಬರನ್ನು ಕಟ್ಟಿ ಹಾಕಿದ ದರೋಡೆಕೋರರ ತಂಡ ನೆಲ ಅಗೆದು ಬರಿಗೈಯಲ್ಲಿ ವಾಪಾಸಾದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

Advertisement

9 ಮಂದಿಯ ತಂಡ ಕೃತ್ಯದಲ್ಲಿ ಭಾಗಿಯಾಗಿದ್ದು  ವಿಘ್ನರಾಜ್‌ ಭಟ್‌ ಅವರ ಮನೆಗೆ ನುಗ್ಗಿ ಅವರನ್ನು ಕಟ್ಟಿ ಹಾಕಿ ಮನೆಯ ಗೇಟ್‌ ಬಳಿ ನೆಲವನ್ನು ಅಗೆದಿದ್ದಾರೆ. ಏನೂ ಸಿಗದೆ ಬರಿಗೈಯಲ್ಲಿ ವಾಪಾಸಾಗಿದ್ದಾರೆ. ಅಚ್ಚರಿಯೆಂದರೆ ವಿಘ್ನರಾಜ್‌ ಅವರ ಕೈಗಳನ್ನು ಕಟ್ಟಿದ್ದು ಬಿಟ್ಟರೆ ಬೇರೆ ಯಾವುದೇ ರೀತಿಯ ಹಾನಿ ಮಾಡುವುದಾಗಿ  ಇತರ ಯಾವುದೇ ಸ್ವತ್ತುಗಳನ್ನು ಒಯ್ದಿಲ್ಲ. 

ಪೊಲೀಸರಿಗೆ ದೂರು ನೀಡಲಾಗಿದ್ದು ಸ್ಥಳಕ್ಕೆ ಎಸ್‌ಪಿ ಭೂಷಣ್‌ ರಾವ್‌ ಬೋರಸೆ ಮತ್ತು ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿಘ್ನರಾಜ್‌ ಅವರಲ್ಲಿ  ಘಟನೆಯ ಬಗ್ಗೆ ವಿವರ ಪಡೆದಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next