Advertisement

ಕೊಲೆ ಆರೋಪಿಗಳ ಬಂಧನಕ್ಕೆ ಒತ್ತಾಯ

11:01 AM Feb 24, 2022 | Team Udayavani |

ಆಳಂದ: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಗ್ರಾಮದವರಾದ ಭಾರತೀಯ ಅರೆಸೇನಾ ಪಡೆಯಲ್ಲಿ ಬಿಎಸ್‌ಫ್‌ ಸೇವಾ ನಿರತರಾಗಿರುವ ಯೋಧ ಅಮರೇಶ ಅವರ ತಾಯಿ ಹತ್ಯೆಯಾಗಿರುವ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೈನಿಕರ ಅಭಿವೃದ್ಧಿ ಸಂಘ ಒತ್ತಾಯಿಸಿದೆ.

Advertisement

ತಹಶೀಲ್ದಾರ್‌, ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಸಂಘದ ಅಧ್ಯಕ್ಷ ಮಾಣಿಕರಾವ್‌ ಎಸ್‌. ಬಿರಾದಾರ ನೇತೃತ್ವದಲ್ಲಿ ಪ್ರಮುಖರು ಈ ಕುರಿತು ಮನವಿ ಸಲ್ಲಿಸಿ, ಒತ್ತಾಯಿಸಿದರು.

ಯೋಧ ಅಮರೇಶ ರಜೆ ಮೇಲೆ ಊರಿಗೆ ಬಂದಾಗ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಅವರ ತಾಯಿಯನ್ನು ಕೊಲೆ ಮಾಡಲಾಗಿದೆ. ಆದ್ದರಿಂದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಮುಖ ಸಿದ್ಧಲಿಂಗಪ್ಪ ಮಲಶೆಟ್ಟಿ, ಈರಣ್ಣಾ ಹೂಗಾರ, ಹನುಮಂತ ಪಾಟೀಲ, ಶಶಿ ಯಳಮೇಲಿ, ರಾಜು ಕೋರಳ್ಳಿ ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next