Advertisement

ಸಿಂಘು ಗಡಿಯಲ್ಲಿ ಪೊಲೀಸರಿಂದ ದೇಶಭಕ್ತಿ ಗೀತೆ ಪ್ರಸಾರ; ಪ್ರತಿಭಟನಾ ನಿರತ ರೈತರಿಂದ ಆಕ್ಷೇಪ

09:08 AM Feb 02, 2021 | Team Udayavani |

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು, ಧ್ವನಿವರ್ಧಕಗಳ ಮುಖಾಂತರ ದೆಹಲಿ ಪೊಲೀಸರು ದೇಶ ಭಕ್ತಿ ಗೀತೆಗಳನ್ನು ಪ್ರಸಾರ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ ಎಂದು ವರದಿಯಾಗಿದೆ.

Advertisement

ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ ಪತ್ರಿಕಾ ಹೇಳಿಕೆ ಪ್ರಕಾರ, ಕೆಂದ್ರ ಸರ್ಕಾರದೊಂದಿಗೆ ಮಾತುಕತೆಗೂ ಮುನ್ನ ದೆಹಲಿ ಪೊಲೀಸರು ಸಿಂಘು ಗಡಿಯಲ್ಲಿ ಬಳಸುತ್ತಿರುವ ಲೌಡ್ ಸ್ಪೀಕರ್ ಗಳನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿವೆ.

ಇದನ್ನೂ ಓದಿ:  ಬಾಲಿವುಡ್ ಬೆಡಗಿ ಸಾರಾ ಅಲಿ ಖಾನ್ ಗ್ಲಾಮರಸ್ ಫೋಟೋ ಗ್ಯಾಲರಿ

ಈ ಕುರಿತ ವಿಡಿಯೋ ಒಂದು ಕೂಡ ವೈರಲ್ ಆಗಿದ್ದು, ಬಾಲಿವುಡ್ ‘ಬಾರ್ಡರ್’  ಸಿನಿಮಾದ ‘Sandese Aate Hain’ ಎಂಬ ಹಾಡನ್ನು ಲೌಡ್ ಸ್ಪೀಕರ್ ಮೂಲಕ ಪ್ರಸಾರ ಮಾಡಲಾಗುತ್ತಿದೆ. ಸ್ಥಳದಲ್ಲಿ ಅತೀ ಹೆಚ್ಚು ಭದ್ರತೆಯನ್ನು ನಿಯೋಜಿಸಿರುವುದು ಕೂಡ ಕಂಡುಬರುತ್ತಿದೆ.

Advertisement

ಮಾತ್ರವಲ್ಲದೆ ರೈತ ಸಂಘಟನೆಗಳು ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರದ ನಂತರ  ಬಂಧಿಸಲ್ಪಟ್ಟವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.ಜೊತೆಗೆ ಪ್ರತಿಭಟನಾ ಸ್ಥಳದಲ್ಲಿ ನೀರು, ಶೌಚಾಲಯ, ಇಂಟರ್ ನೆಟ್ ವ್ಯವಸ್ಥೆಯನ್ನೂ ಕಲ್ಪಿಸಬೇಕೆಂದು ಬೇಡಿಕೆಯಿರಿಸಿವೆ.

ಜನವರಿ 26 ರಂದು ಹಿಂಸಾಚಾರ ನಡೆದ ಬಳಿಕ ದೆಹಲಿಯ ಸಿಂಘು ಗಡಿಯಲ್ಲಿ ಅತೀ ಹೆಚ್ಚು ಪೊಲೀಸರನ್ನು ಹಾಗೂ ಭದ್ರತಾಪಡೆಗಳನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:  ಹಿಮಪಾತದಿಂದ ರಸ್ತೆ ಬಂದ್; ಸೇನಾ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

Advertisement

Udayavani is now on Telegram. Click here to join our channel and stay updated with the latest news.

Next