Advertisement

ಅಭಿವೃದ್ಧಿ ಮರೆತು ರಾಮ ಮಂದಿರಕ್ಕೆ ಗಮನ ಹರಿಸಿದ್ದೇ ಸೋಲಿಗೆ ಕಾರಣ !

03:07 PM Dec 11, 2018 | Team Udayavani |

ಪುಣೆ:ಅಭಿವೃದ್ಧಿ ಕುರಿತು ಗಮನ ಹರಿಸುವುದನ್ನು ಬಿಟ್ಟು,ರಾಮ ಮಂದಿರಕ್ಕೆ ಗಮನ ನೀಡಿದ್ದರಿಂದ ನಮಗೆ ಸೋಲಾಗಿದೆ ಎಂದು ಬಿಜೆಪಿ ರಾಜ್ಯ ಸಭಾ ಸದಸ್ಯ ಸಂಜಯ್‌ ಕಾಕಡೆ ಪಕ್ಷ ಇಕ್ಕಟ್ಟಿಗೆ ಸಿಲುಕುವ ಹೇಳಿಕೆ ನೀಡಿದ್ದಾರೆ.

Advertisement

ಪಂಚರಾಜ್ಯ ಚುನಾವಣಾ ಫ‌ಲಿತಾಂಶದಲ್ಲಿ ಪಕ್ಷಕ್ಕೆ ಹಿನ್ನಡೆ ಆದ ಬಗ್ಗೆ ಪ್ರತಿಕ್ರಿಯಿಸಿದ ಕಾಕಡೆ ಅವರು ನಾವು ರಾಮ ಮಂದಿರ,ಪ್ರತಿಮೆ ಮತ್ತು ಹೆಸರು ಬದಲಾವಣೆಯತ್ತ ಗಮನ ಹರಿಸಿದ ಕಾರಣ ಸೋಲಾಗಿದೆ ಎಂದರು.

ಇದೇ ವೇಳೆ ಛತ್ತೀಸ್‌ಗಢದ ಸೋಲು ಮೊದಲೇ ತಿಳಿದಿತ್ತು ಆದರೆ ಮಧ್ಯಪ್ರದೇಶದಲ್ಲಿನ ಬೆಳವಣಿಗೆ ಅಚ್ಚರಿ ತಂದಿದೆ ಎಂದರು. 

 ಕಾಕಡೆ  ಈ ಹಿಂದೆ ಗುಜರಾತ್‌ ಚುನಾವಣಾ ಫ‌ಲಿತಾಂಶ ವೇಳೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿ ಪಕ್ಷ ವಿರೋಧಿ ಹೇಳಿಕೆ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next