Advertisement

ದೇಗುಲ ತೆರೆಯುವ ನಿರ್ಧಾರ ಶೀಘ್ರ: ಸಚಿವ ಕೋಟ

02:37 AM May 04, 2020 | Team Udayavani |

ತೆಕ್ಕಟ್ಟೆ: ಕೋವಿಡ್‌-19 ಭೀತಿಯಿಂದಾಗಿ ಮುಚ್ಚಿ ರುವ ರಾಜ್ಯದ ದೇಗುಲಗಳ ಬಾಗಿಲುಗಳನ್ನು ತೆರೆಯುವ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Advertisement

ರವಿವಾರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವತಿ ಯಿಂದ ನಡೆದ ನೆರವು ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೋವಿಡ್‌-19 ಕಾಟ ಆರಂಭವಾದ ಬಳಿಕ ಸೋಂಕು ಪ್ರಸರಣವನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದ ದೇವಸ್ಥಾನಗಳ ಬಾಗಿಲು ಬಂದ್‌ ಮಾಡಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ. ಭಕ್ತರ ಕೋರಿಕೆಗೆ ಅನುಗುಣವಾಗಿ ದೇಗುಲಗಳನ್ನು ತೆರೆಯುವ, ಭಕ್ತರ ಭೇಟಿಯ ಸಂದರ್ಭ ಸಾಮಾಜಿಕ ಅಂತರವನ್ನು ಹೇಗೆ ಕಾಪಾಡಿಕೊಳ್ಳಬೇಕು ಇತ್ಯಾದಿಗಳ ಬಗ್ಗೆ ಇನ್ನೆರಡು ದಿನ ಗಳಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next