Advertisement

ಬಿಜೆಪಿಯ ಯಾವುದೇ ಶಾಸಕರು ಮಾರಾಟಕ್ಕೆ ಇರುವ ವ್ಯಕ್ತಿಗಳಲ್ಲ: ಡಿಸಿಎಂ ಸವದಿ

02:13 PM May 29, 2020 | keerthan |

ಹಾವೇರಿ: ಬಿಜೆಪಿಯ ಯಾವುದೇ ಶಾಸಕರು ಮಾರಾಟಕ್ಕೆ ಇರುವ ವ್ಯಕ್ತಿಗಳಲ್ಲ. ಎಲ್ಲರೂ ಅತ್ಯಂತ ಪ್ರಾಮಾಣಿಕರು, ನಿಷ್ಠೆಯನ್ನು ಹೊಂದಿರುವ ಶಾಸಕರು. ಆ ರೀತಿ ಆಗುವುದು ಬೇರೆ ಪಕ್ಷದಲ್ಲಿ, ನಮ್ಮಲ್ಲಿ ಆಗುವುದಿಲ್ಲ. ಹೀಗಾಗಿ ಯಾರು ಮಾರಾಟವಾಗುವುದಿಲ್ಲಾ, ಯಾರು ಸೆಳೆಯುವುದಿಲ್ಲಾ ಉಪಮುಖ್ಯಮಂತ್ರಿ ಲಕ್ಣ್ಮಣ ಸವದಿ ಹೇಳಿದ್ದಾರೆ.

Advertisement

ಹಾವೇರಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಂದ ಬಿಜೆಪಿ ಅತೃಪ್ತ ಶಾಸಕರನ್ನು ಸೆಳೆಯುವ ಸಾಧ್ಯತೆಯಿದೆ ಎಂಬ ಮಾತಿಗೆ ಸ್ಪಷ್ಟನೆ ನೀಡಿದರು.

ಬಿಜೆಪಿ ಶಾಸಕರ ರಹಸ್ಯ ಸಭೆ ವಿಚಾರವಾಗಿ ಉಮೇಶ ಕತ್ತಿ ಸ್ಪಷ್ಟನೆ ನೀಡಿದ್ದಾರೆ. ಉತ್ತರ ಕರ್ನಾಟಕದ ಅನೇಕ ಶಾಸಕರು ಊಟಕ್ಕೆ ಸೇರಿದ್ದೇವೆ. ಯಾವುದೇ ಭಿನ್ನಮತ, ಕಾರ್ಯಾಚರಣೆ ಮಾಡುತ್ತಿಲ್ಲಾ ಎಂದು ಅವರು ಹೇಳಿದ್ದಾರೆ. ಹೀಗಾಗಿ ನಾವು ಹೇಳುವುದು ಏನು ಇಲ್ಲಾ ಎಂದು ಸವದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next