Advertisement

ಬೆಳ್ಳಿತೆರೆಗೆ ಸೈಕಲ್‌ ಸ್ಟೋರಿ

04:32 AM Jul 01, 2020 | Lakshmi GovindaRaj |

ಮುಂಬೈ: ಕೋವಿಡ್‌ 19 ಲಾಕ್‌ಡೌನ್‌ ವೇಳೆ ಗಾಯಾಳು ತಂದೆಯನ್ನು ಹಿಂದೆ ಕೂರಿಸಿಕೊಂಡು 1,200 ಕಿ.ಮೀ ಸೆ„ಕಲ್‌ ತುಳಿದು ಹುಟ್ಟೂರು ತಲುಪಿದ್ದ ಬಿಹಾರದ ಬಾಲಕಿ ಜ್ಯೋತಿ ಕುಮಾರಿಯ ಸಾಸಹಗಾಥೆ ನಿಮಗೆ ನೆನಪಿರಬಹುದು. ಆ ಹುಡುಗಿಯ ಸಾಹಸದ ಕಥೆ ಬೆಳ್ಳಿ ಪರದೆ ಮೇಲೆ ಸಿನಿಮಾ ರೂಪದಲ್ಲಿ ಬರಲಿದೆ.

Advertisement

ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವಿಮೇಕ್ ಫಿಲಮ್ಸ್‌ ಸಂಸ್ಥೆ ಜ್ಯೋತಿ ಯ ಜೀವನ ಆಧರಿಸಿ ಸಿನಿಮಾ ಮಾಡುವ ಹಕ್ಕುಗಳನ್ನು ಪಡೆದುಕೊಂಡಿದೆ.  ಕೇಂದ್ರದ ಮಹತ್ವಾಕಾಂಕ್ಷಿ ಕಾರ್ಯಕ್ರಮ “ಆತ್ಮನಿರ್ಭರ್‌’ ಎಂಬುದೇ ಸಿನಿ  ಮಾದ ಟೆ„ಟಲ್‌. ಆಗಸ್ಟ್‌ನಿಂದ ಚಿತ್ರೀ ಕರಣ ಆರಂಭವಾಗಲಿದೆ. ವಿಶೇಷ ವೇನೆಂದರೆ ಜ್ಯೋತಿ ಕುಮಾ ರಿಯೇ ಈ ಚಿತ್ರದ ನಾಯಕಿ. ಲಾಕ್‌ಡೌನ್‌ ಸಂದರ್ಭದಲ್ಲಿ ದುಡಿಮೆ ಇಲ್ಲದೆ ಜ್ಯೋತಿ ಕುಟುಂಬ ಸದಸ್ಯರು ಕಂಗೆಟ್ಟಿದ್ದರು.

ಈ ವೇಳೆ ಕುಟುಂಬದ ಉಳಿತಾಯದ ಹಣವನ್ನೆಲ್ಲಾ ಹಾಕಿ ಸೆಕೆಂಡ್‌ ಹ್ಯಾಂಡ್‌ ಸೆ„ಕಲ್‌ ಖರೀದಿಸಿ, ಅದರಲ್ಲಿ ತಂದೆಯನ್ನು ಕೂರಿಸಿಕೊಂಡು ಗುರುಗ್ರಾಮದಿಂದ ಬಿಹಾರದಲ್ಲಿನ  ತನ್ನೂರಿನವರೆಗೆ ಕರೆದೊಯ್ದಿದ್ದ ಜ್ಯೋತಿ ಕುಮಾರಿ, ಕೇವಲ 8 ದಿನದಲ್ಲಿ 1,200 ಕಿ.ಮೀ ದೂರ ಸೆ„ಕಲ್‌ ತುಳಿದಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next