Advertisement

ವಾಕ್‌ ರೇಸರ್‌ ಇರ್ಫಾನ್‌ ಅಮಾನತು ಪ್ರಶ್ನಿಸಿದ ಭಾರತ

07:45 AM Apr 18, 2018 | Team Udayavani |

ಹೊಸದಿಲ್ಲಿ: ಸೂಜಿ ಪ್ರಕರಣದ ಆರೋಪದಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾ ಗ್ರಾಮದಿಂದ ಕಿಕ್‌ಔಟ್‌ ಆಗಿದ್ದ ಭಾರತದ ಆ್ಯತ್ಲೀಟ್‌ ವಾಕ್‌ ರೇಸರ್‌ ಕೆ.ಟಿ. ಇರ್ಫಾನ್‌ ಬೆನ್ನಿಗೆ ಇದೀಗ ಭಾರತ ನಿಂತಿದೆ. ಆ್ಯತ್ಲೀಟ್‌ ವಿರುದ್ಧ ಸಿಜಿಎಫ್ (ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌) ತೆಗೆದುಕೊಂಡಿರುವ ಕಠಿನ ಕ್ರಮವನ್ನು ಭಾರತ ಪ್ರಶ್ನಿಸಿದೆ. 

Advertisement

ಕೆ.ಟಿ.ಇರ್ಫಾನ್‌ ತಂಗಿದ್ದ ಕೊಠಡಿ ಹೊರಕ್ಕೆ ಸೂಜಿ ಸಿಕ್ಕಿದ್ದರಿಂದ ಅದನ್ನು ಅವರೇ ಬಳಸಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಹೀಗಿರುವಾಗ ಅವರ ಪರ ನಿಲ್ಲಲು ಭಾರತ ನಿರ್ಧರಿಸಿದೆ. ಇದೇ ಪ್ರಕರಣದಲ್ಲಿ ಸಿಲುಕಿರುವ ಭಾರತ ಮತ್ತೋರ್ವ ಆ್ಯತ್ಲೀಟ್‌ ರಾಕೇಶ್‌ ಬಾಬು ಅವರ ಮೇಲೆ ಹೇರಿರುವ ಅಮಾನತು ಕ್ರಮವನ್ನು ಪ್ರಶ್ನಿಸದಿರಲು ನಿರ್ಧರಿಸಲಾಗಿದೆ. ಏಕೆಂದರೆ ರಾಕೇಶ್‌ ಅವರ ಬ್ಯಾಗ್‌ನಲ್ಲಿಯೇ ಸೂಜಿಗಳು ಪತ್ತೆಯಾಗಿದ್ದವು. ಹೀಗಾಗಿ ಇದನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಭಾರತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next