Advertisement

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಯಾವ ವಲಯಕ್ಕೆ ಏನು ಭರವಸೆ: ಇಲ್ಲಿದೆ ಸಂಕ್ಷಿಪ್ತ ಚಿತ್ರಣ

11:11 PM May 02, 2023 | Team Udayavani |

ಕೃಷಿ ಮತ್ತು ರೈತರ ಸ್ನೇಹಿ
 ರೈತರಿಗೆ 10 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ. ಶೇ. 3ರ ಬಡ್ಡಿದರದಲ್ಲಿ 15 ಲ. ರೂ.ವರೆಗೆ ಸಾಲ.
 ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ನೀತಿ ಜಾರಿ, ಪ್ರತಿ ಕಂದಾಯ ವಲಯಕ್ಕೊಂದು ಬೆಲೆ ಆಯೋಗ ರಚನೆ
 ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸ್ಟಾರ್ಟ್‌ ಅಪ್‌ ಆರಂಭಿಸಲು 500 ಕೋಟಿ ರೂ.
 ಗ್ರಾಮೀಣ ಮಹಿಳೆಯರ ಕೃಷಿ ಆಧಾರಿತ ಉದ್ಯಮಕ್ಕೆ 200 ಕೋಟಿ ರೂ. ಹೂಡಿಕೆ
 ಬಿಜೆಪಿ ಜಾರಿಗೆ ತಂದ ಕೃಷಿ ಕಾಯ್ದೆಗಳು ಮತ್ತು ಎಪಿಎಂಸಿ ಕಾಯ್ದೆಗಳ ರದ್ದು
 ಸಾವಯವ ಸರದಾರ ಯೋಜನೆ ಅಡಿ 2,500 ಕೋಟಿ ಹೂಡಿಕೆ ತೋಟಗಾರಿಕೆ
 ದ್ರಾಕ್ಷಿ ಬೆಳೆಗಾರರಿಗೆ ಸಬ್ಸಿಡಿಗೆ 500 ಕೋಟಿ
 ಪುಷ್ಪೋದ್ಯಮಕ್ಕೆ ವಿಶೇಷ ಪ್ಯಾಕೇಜ್‌ಗೆ 500 ಕೋಟಿ ರೂ.
 ಕಾಫಿ ಕರ್ನಾಟಕ ಬ್ರ್ಯಾಂಡ್‌ ಸೃಷ್ಟಿ
 ರೇಷ್ಮೆ ಸ್ಥಿರತೆ ನಿಧಿಗೆ ಆರಂಭಿಕ ಹಂತದಲ್ಲಿ 2 ಸಾವಿರ ಕೋಟಿ ಅನುದಾನ
 ಎಲ್ಲ ರೇಷ್ಮೆ ನೂಲು ರೀಲರ್‌ಗಳಿಗೆ 3 ಲಕ್ಷ ಬಡ್ಡಿರಹಿತ ಸಾಲ ಹೈನುಗಾರಿಕೆ
 ಎಲ್ಲ ಕುರಿ, ಮೇಕೆ ಸಾಕಣೆದಾರರ 1 ಲಕ್ಷ ರೂ.ವರೆಗಿನ ಸಾಲ ಮನ್ನಾ
 ಪ್ರತಿ ಲೀ. ಹಾಲಿನ ಸಬ್ಸಿಡಿ 7 ರೂ.ಗೆ ಹೆಚ್ಚಳ
 ಹಸು, ಎಮ್ಮೆಗಳ ಖರೀದಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗೆ ಸಾಲ
 ಕುರಿ ಸಾಕಾಣಿಕೆಗೆ 1 ಸಾವಿರ ಕೋಟಿ ನಿಧಿ ಸ್ಥಾಪನೆ ಮೀನುಗಾರಿಕೆ
 ಮೀನುಗಾರಿಕೆ ಮಹಿಳೆಯರಿಗೆ 3 ಲಕ್ಷದವರೆಗೆ ಬಡ್ಡಿರಹಿತ ಸಾಲ
 ಮೀನುಗಾರಿಕೆ ಕ್ಷೇತ್ರ ಸುಧಾರಣೆಗೆ 5 ಸಾವಿರ ಕೋಟಿ
 ಮೀನುಗಾರಿಕೆ ಸ್ಥಗಿತಗೊಂಡ ಸಮಯದಲ್ಲಿ ತಿಂಗಳಿಗೆ 6 ಸಾವಿರ ರೂ.
 ನಾಡದೋಣಿ ಮೀನುಗಾರರಿಗೆ 10 ಸಾವಿರ ಹಣಕಾಸು ನೆರವು ನೀರಾವರಿ
 ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ,ಆಲಮಟ್ಟಿ ಎತ್ತರ, ಭದ್ರಾ ಮೇಲ್ದಂಡೆ, ವಾರಾಹಿ ಯೋಜನೆಗಳು ಐದು ವರ್ಷಗಳಲ್ಲಿ ಪೂರ್ಣ
 ಎತ್ತಿನಹೊಳೆ ಯೋಜನೆ ಎರಡು ವರ್ಷಗಳಲ್ಲೇ ಪೂರ್ಣ
 ಬಯಲುಸೀಮೆಗಳಲ್ಲಿ ಚೆಕ್‌ಡ್ಯಾಂ ಮತ್ತು ಕೃಷಿಹೊಂಡ ನಿರ್ಮಾಣ ಆಡಳಿತ ಮತ್ತು ಆಡಳಿತ ನಿರ್ವಹಣೆ
 ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ಕಠಿನ ನಿಯಮಗಳ ಜಾರಿ, ನಿಯಂತ್ರಣ ಕ್ರಮಗಳ ಪಾರದರ್ಶಕತೆ ಮತ್ತು ಲೋಕಾಯುಕ್ತ ಬಲವರ್ಧನೆ.
 ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆ- ಸಂಬಂಧಿತ ನಿಯಮಗಳ ಕಟ್ಟುನಿಟ್ಟಿನ ಪಾಲನೆ
 ಪ್ರತಿ ಗ್ರಾಮ ಪಂಚಾಯತ್‌ಮತ್ತು ನಗರ ವಾರ್ಡ್‌ಗಳಲ್ಲಿ ಕೋಮು, ಜಾತಿ ಹೆಸರಿನಲ್ಲಿ ಪಸರಿಸುವ ದ್ವೇಷ, ಅಸಹನೆ, ವಿಭಜನೆ ತಪ್ಪಿಸಲು ಭಾರತ್‌ ಜೋಡೋ ಸಾಮಾಜಿಕ ಸೌಹಾರ್ದ ಸಮಿತಿ ರಚಿಸಿ, ಅನುದಾನ

Advertisement

ಸಾರ್ವಜನಿಕ ಸೇವೆಗಳು
 2006ರಿಂದ ನೇಮಕಗೊಂಡ ಮತ್ತು ಪಿಂಚಣಿಗೆ ಅರ್ಹತೆ ಹೊಂದಿದ ಎಲ್ಲ ಸರಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆ ಅಡಿ ತರಲಾಗುವುದು
 ಅತಿಥಿ ಮತ್ತು ಗುತ್ತಿಗೆ ಆಧಾರದಲ್ಲಿ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಸರ್ಕಾರಿ ನೇಮಕಾತಿಗಳಲ್ಲಿ ಆದ್ಯತೆ ಇರುವಂತೆ ಕಾಯ್ದೆಯಲ್ಲಿ ತಿದ್ದುಪಡಿ
 ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂ. ಗೌರವಧನ

ಪೊಲೀಸ್‌ ವ್ಯವಸ್ಥೆ
 ಒಟ್ಟು ಪೊಲೀಸ್‌ ಬಲದಲ್ಲಿ ಶೇ.33ರಷ್ಟು ಮಹಿಳಾ ಪೊಲೀಸ್‌ ಬಲ ಇರುವಂತೆ ನೇಮಕಾತಿ. ಇಲ್ಲಿ ಕನಿಷ್ಠ 1ರಷ್ಟು ತೃತೀಯ ಲಿಂಗಿಗಳಿಗೆ ಅವಕಾಶ
 ರಾತ್ರಿ ಪಾಳಿಯ ಸಿಬ್ಬಂದಿಗೆ 5 ಸಾವಿರ ರೂ. ವಿಶೇಷ ಮಾಸಿಕ ಭತ್ಯೆ ಮತ್ತು ಎಲ್ಲ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳು ವೇತನ ಹೆಚ್ಚುವರಿ ಪಾವತಿ
 ಮಿಲಿಟರಿ ಕಲ್ಯಾಣ ಮಾದರಿಯಲ್ಲಿ ಪ್ರತೀ ಜಿಲ್ಲೆಯಲ್ಲಿ ಪೊಲೀಸ್‌ ಕಲ್ಯಾಣ ಕೇಂದ್ರ ಕಾನೂನು ಮತ್ತು ನ್ಯಾಯ
 ಎಲ್ಲ ನ್ಯಾಯಾಲಯಗಳ ಆಧುನೀಕರಣಕ್ಕೆ 2 ಸಾವಿರ ಕೋಟಿ ನಿಧಿ
 ಬಿಜೆಪಿ ಜಾರಿಗೆ ತಂದ ಎಲ್ಲ ಜನವಿರೋಧಿ ಕಾನೂನುಗಳು 1 ವರ್ಷದೊಳಗೆ ರದ್ದು
 ಧರ್ಮ- ಜಾತಿ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತುವ ಬಜರಂಗದಳ ಮತ್ತು ಪಿಎಫ್ಐನಂತಹ ಸಂಘಟನೆಗಳ ನಿಷೇಧಕ್ಕೆ ಕ್ರಮ ಗ್ರಾಮೀಣ ಮೂಲಸೌಲಭ್ಯ
 ಪ್ರತಿ ಗ್ರಾ.ಪಂ.ಯಲ್ಲಿ ಹೈಸ್ಪೀಡ್‌ ವೈ-ಫೈ ಹಾಟ್‌ಸ್ಪಾಟ್‌ ಸ್ಥಾಪನೆ
 ತಾ.ಪಂ., ಗ್ರಾ.ಪಂ.ಗಳಿಗೆ ಬಜೆಟ್‌ನಲ್ಲಿ ಅನುದಾನ ಹೆಚ್ಚಳ
ಎಲ್ಲ ಮನೆಗಳಿಗೆ ಕುಡಿಯುವ ನೀರು ಮತ್ತಿತರ ಯೋಜನೆಗಳಿಗೆ ಐದು ವರ್ಷಕ್ಕೆ 50 ಸಾವಿರ ಕೋಟಿ ರೂ. ಹೂಡಿಕೆ ನಗರಾಭಿವೃದ್ಧಿ
 10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇರುವ ನಗರಗಳಲ್ಲೂ ಟೆಂಡರ್‌ಶ್ಯೂರ್‌ ಮಾದರಿ ರಸ್ತೆಗಳ ನಿರ್ಮಾಣ
 ವಸತಿ ಸಮುತ್ಛಯಗಳು ಸಂಪೂರ್ಣ ನಿರ್ಮಾಣಗೊಂಡ ಬಳಿಕವೇ ಮಾಲಿಕರಿಗೆ ವಸತಿಗಳನ್ನು ಹಸ್ತಾಂತರ ಮಾಡುವ ಬಿಗಿ ಕಾನೂನು
 2ನೇ ಹಂತದ ನಗರಗಳಲ್ಲಿ ಉದ್ಯೋಗ ನೀಡುವ ಉದ್ಯಮಗಳಿಗೆ ಕಟ್ಟಡ ನಿರ್ಮಾಣದಲ್ಲಿ ಮಹಡಿ ಪ್ರದೇಶದ ಅನುಪಾತವನ್ನು ಎಫ್ಎಆರ್‌ 2ರಷ್ಟು ಹೆಚ್ಚಳ ಕೈಗಾರಿಕೆ ಮತ್ತು ವಾಣಿಜ್ಯ
 ಮಂಗಳೂರಿನಲ್ಲಿ ಪ್ರವಾಸೋದ್ಯಮ, ವ್ಯಾಪಾರ ಉತ್ತೇಜನಕ್ಕೆ ಚಿನ್ನ ಮತ್ತು ವಜ್ರದ ಪಾರ್ಕ್‌ ಸ್ಥಾಪನೆ
 ರೈತರಿಗೆ ಸ್ವಂತ ಜಮೀನಿನಲ್ಲಿ ಕೈಗಾರಿಕೆ ಸ್ಥಾಪಿಸಲು ಇರುವ ತೊಡಕುಗಳ ನಿವಾರಣೆ
 ಸಣ್ಣ, ಸೂಕ್ಷ್ಮ ಕೈಗಾರಿಕೆಗಳಿಗೆ ಸಾಲ ನೀಡಲು ರಾಜ್ಯಮಟ್ಟದ ಕ್ರೆಡಿಟ್‌ ಗ್ಯಾರಂಟಿ ಯೋಜನೆ ಪ್ರವಾಸೋದ್ಯಮ
 ಕರಾವಳಿಯಲ್ಲಿ ಬೋಟ್‌ಹೌಸ್‌ ಮತ್ತು ಕ್ರೂéಸ್‌ಶಿಪ್‌ ಸಂಚಾರಕ್ಕೆ ಉತ್ತೇಜನ
 ಪ್ರತಿ ಕ್ಷೇತ್ರದಲ್ಲಿ 50 ಟ್ಯಾಕ್ಸಿಗಳಿಗೆ ಪರವಾನಗಿ, ಶೇ. 5ರ ಬಡ್ಡಿದರದಲ್ಲಿ ಸಹಾಯಧನ
 20ಕ್ಕಿಂತ ಅಧಿಕ ನೌಕರರು ಇರುವ ಹೋಟೆಲ್‌ಗ‌ಳಿಗೆ ಉದ್ಯಮದ ಸ್ಥಾನಮಾನ ಇಂಧನ
 ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌
 5 ಸಾವಿರ ಮೆ.ವ್ಯಾ.ವಿದ್ಯುತ್‌ ಉತ್ಪಾದನೆಗೆ ಬೃಹತ್‌ ಸೋಲಾರ್‌ ಪಾರ್ಕ್‌ ಸ್ಥಾಪನೆ ಸಾರಿಗೆ
 ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೇವೆ
 2ವರ್ಷಗಳಲ್ಲಿ ಒಟ್ಟು ಬಸ್‌ಗಳ ಸಂಖ್ಯೆಯಲ್ಲಿ ಶೇ. 50 ವಿದ್ಯುತ್‌ಚಾಲಿತ ಬಸ್‌ಗಳು ಇರುವಂತೆ ಯೋಜನೆ ಶಿಕ್ಷಣ
ಅವೈಜ್ಞಾನಿಕ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪ ಡಿಸಿ ಕರ್ನಾಟಕ ಶಿಕ್ಷಣ ನೀತಿ ಅನುಷ್ಠಾನ.
 ವಿದ್ಯಾರ್ಥಿ ವೇತನ ವಿತರಿಸಲು 2 ಸಾವಿರ ಕೋಟಿ ಮೂಲನಿಧಿಯೊಂದಿಗೆ ರಾಜ್ಯ ಶೈಕ್ಷಣಿಕ ಹಣಕಾಸು ನಿಗಮ ಸ್ಥಾಪನೆ
 ಪಿಯುಸಿಯಿಂದ ಉನ್ನತ ಶಿಕ್ಷಣದವರೆಗೆ ಎಲ್ಲ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಟಾಪ್‌/ ಡಿಜಿಟಲ್‌ ನೋಟ್‌ಪ್ಯಾಡ್‌ ವಿತರಣೆ
 ವಿದ್ಯಾಸಿರಿ ಸ್ಕಾಲರ್‌ಶಿಪ್‌ 15ರಿಂದ 20 ಸಾವಿರಕ್ಕೆ ಹೆಚ್ಚಳ

ಆರೋಗ್ಯ
 ರಾಷ್ಟ್ರೀಯ ಸ್ವಾಸ್ಥ್ಯಬಿಮಾ ಯೋಜನೆ ಮೀನುಗಾರರು, ನೇಕಾರ ಸಮುದಾಯ, ಕಟ್ಟಡ ಕಾರ್ಮಿಕರು, ಮನೆ ಕೆಲಸದವರು ಮತ್ತಿತರ ಅಸಂಘಟಿತ ಕ್ಷೇತ್ರಗಳಿಗೆ ವಿಸ್ತರಣೆ
 ಕಂದಾಯ ವಿಭಾಗಕ್ಕೊಂದು ಜಯದೇವ ಮಾದರಿ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಮಾದರಿ ಕ್ಯಾನ್ಸರ್‌ ಆಸ್ಪತ್ರೆ, ನಿಮ್ಹಾನ್ಸ್‌ ಮಾದರಿ ಮನೋರೋಗ ಚಿಕಿತ್ಸಾ ಆಸ್ಪತ್ರೆ
 ಡಾ.ಪುನೀತ್‌ ರಾಜ್‌ಕುಮಾರ್‌ ಹೃದಯ ಆರೋಗ್ಯ ಯೋಜನೆ

ವಸತಿ
 5 ವರ್ಷದಲ್ಲಿ ಚಾಲ್ತಿಯಲ್ಲಿರುವ ಯೋಜನೆ ಮೂಲಕ ಸರ್ಕಾರಿ ವಸತಿ ಸೌಲಭ್ಯ
 ಬಡವರಿಗಾಗಿ ನಿರ್ಮಿಸುವ ಯೋಜನೆಗಳಿಗೆ ಸರ್ಕಾರದಿಂದ 3.5 ಲಕ್ಷ ಸಬ್ಸಿಡಿ ಸಹಕಾರ

Advertisement

ಸಮಾಜ ಕಲ್ಯಾಣ
 ಹಿಂದುಳಿದ ವರ್ಗಗಳ ಜನಗಣತಿ ವರದಿ ಅನುಷ್ಠಾನ
 5 ವರ್ಷಗಳಲ್ಲಿ ಎಲ್ಲ ಪ.ಜಾತಿ ಮತ್ತು ಪಂಗಡ ಕುಟುಂಬಗಳಿಗೆ ಮನೆ
 ಮೀಸಲಾತಿ ಪ್ರಮಾಣ ಶೇ. 50ರಿಂದ ಶೇ. 75ರವರೆಗೆ ಹೆಚ್ಚಿಸಲು ಕ್ರಮ
 ಗ್ರಾಮೀಣ ಭಾಗದ ಕೌÒರಿಕ ವೃತ್ತಿ ಮಾಡುವವರಿಗೆ ವೃತ್ತಿ ಅಭಿವೃದ್ಧಿಗಾಗಿ ಒಂದು ಸಲದ ಕ್ರಮವಾಗಿ ಒಂದು ಲಕ್ಷ ರೂ. ಸಹಾಯಧನ

ಮಹಿಳಾ ಮತ್ತು ಮಕ್ಕಳ ಕಲ್ಯಾಣ
 ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ.
 ಮಹಿಳಾ ಉದ್ಯಮಶೀಲತೆಗಾಗಿ ಪ್ರತಿ ವರ್ಷ 5 ಸಾವಿರ ಮಹಿಳೆಯರಿಗೆ ಬೆಂಬಲ
 ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ದಾದಿಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಇ-ಸ್ಕೂಟರ್‌ ಖರೀದಿಗೆ ಶೇ. 50ರಷ್ಟು ಸಹಾಯಧನ

ಸಂಸ್ಕೃತಿ
 ಕೂಡಲಸಂಗಮದಲ್ಲಿ ಬಸವಪಥ ಸಂಸ್ಥೆಗೆ 100 ಕೋಟಿ
 ಕುವೆಂಪು ಕನ್ನಡ ಸಾಹಿತ್ಯ ಪುರಸ್ಕಾರ ಅಭಿಯಾನದಡಿ 500 ಯುವ ಕವಿಗಳು ಮತ್ತು ಬರಹಗಾರರಿಗೆ ತಲಾ 25 ಸಾವಿರ ಹಣಕಾಸಿನ ನೆರವು
 ಕಾಶ್ಮೀರಿ ವಲಸೆ ಪಂಡಿತರಿಗಾಗಿ ಕಾಶ್ಮೀರ ಸಂಸ್ಕೃತಿ ಕೇಂದ್ರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒಂದು ಬಾರಿ ಕೊಡುಗೆಯಾಗಿ 15 ಕೋಟಿ ಹಾಗೂ ವಾರ್ಷಿಕ 1 ಕೋಟಿ ಅನುದಾನ
 ಜೋಗಪ್ಪ ಸಮುದಾಯ ಮತ್ತು ತೃತೀಯ ಲಿಂಗಿಗಳ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ನೀಡಲು ಕ್ರಮ

ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ವಾರ್ಷಿಕ 500 ಕೋಟಿ ರೂ.
ಬೆಂಗಳೂರು: ಕಲ್ಯಾಣ ಕರ್ನಾಟಕ, ಮೈಸೂರು ಕರ್ನಾಟಕ, ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಘೋಷಿಸಿರುವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಕರಾವಳಿ, ಮಲೆನಾಡು ಭಾಗಕ್ಕೆ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ವಾರ್ಷಿಕ 500 ಕೋಟಿ ರೂ.ಗಳಂತೆ 5 ವರ್ಷಕ್ಕೆ 2,500 ಕೋಟಿ ರೂ.ಗಳನ್ನು ಮೀಸಲಿಡುವುದಾಗಿ ಘೋಷಿಸಿದೆ. ಅದರ ವಿವರ ಈ ಕೆಳಗಿನಂತಿದೆ.
 ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ವಾರ್ಷಿಕ 500 ಕೋಟಿ ರೂ.ಗಳಂತೆ 5 ವರ್ಷಕ್ಕೆ 2,500 ಕೋಟಿ ರೂ.
 ಉಳ್ಳಾಲದಲ್ಲಿ ರಾಣೆ ಅಬ್ಬಕ್ಕ ದೇವಿ ಸ್ಮಾರಕ , ವಸ್ತುಸಂಗ್ರಹಾಲಯ ಸ್ಥಾಪನೆಗೆ 100 ಕೋಟಿ ಅನುದಾನ.
ಯಕ್ಷಗಾನ, ನಾಗಮಂಡಲ, ದೇವತಾರಾಧನೆಯಂತಹ ವಿಶಿಷ್ಟ ಆಚರಣೆಗಳಿಗೆ ವಿಶೇಷ ಅನುದಾನ.
ಅಡಿಕೆಗೆ ಹಳದಿ ರೋಗ , ಇತರೆ ರೋಗಗಳ ನಿಯಂತ್ರಣ, ಮಾರುಕಟ್ಟೆ, ಸಂಶೋಧನೆಗೆ ಕ್ರಮ.
ಅಮರ ಸುಳ್ಯ ರೈತ ಸ್ವಾತಂತ್ರ್ಯ ಹೋರಾಟ ಭವನ ನಿರ್ಮಾಣಕ್ಕೆ ಸ್ಥಳ, 50 ಕೋಟಿ ರೂ. ಅನುದಾನ.
 ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಸರ್ವಾಂಗೀಣ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಪ್ರವಾಸೋದ್ಯಮ ಪ್ರಾಧಿಕಾರ.
ಕಸ್ತೂರಿ ರಂಗನ್‌ ವರದಿಯ ಮರುಪರಿಶೀಲನೆ ಹಾಗೂ ಅರಣ್ಯ ಮತ್ತು ಪರಿಸರ ರಕ್ಷಣೆಗೆ ಪಶ್ವಿ‌ಮ ಘಟ್ಟ ನೀತಿ.
 ಮಂಗಳೂರು, ಉಡುಪಿಯಂತಹ ನಗರಗಳಿಗೆ ಪ್ರತ್ಯೇಕ ಉಪನಗರಗಳ ನಿರ್ಮಾಣ.
ಮೀನುಗಾರರಿಗೆ ವಿಮಾ ರಕ್ಷೆ, ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ.
ಪ್ರತೀ ದಿನದ ಡೀಸೆಲ್‌ ಬಳಕೆ ಪ್ರಮಾಣ 500 ಲೀಟರ್‌ಗೆ ಹೆಚ್ಚಳ.
ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟಿಗಳ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿಗಳನ್ನು ಕೇಂದ್ರದ ಸಹಯೋಗದೊಂದಿಗೆ ಸರ್ವಋತು ಷಟ³ಥ ರಸ್ತೆಯನ್ನಾಗಿ ಅಭಿವೃದ್ಧಿ.
ಕರಾವಳಿಯ 3 ಜಿಲ್ಲೆಗಳಲ್ಲಿ ತಲಾ 2 ಮೀನು ಸಂಸ್ಕರಣ ಪಾರ್ಕ್‌ ನಿರ್ಮಾಣ.

Advertisement

Udayavani is now on Telegram. Click here to join our channel and stay updated with the latest news.

Next