Advertisement

CT Ravi ಡಿಕೆಶಿಗೆ ಆಲೂ ಬಿತ್ತಿ ಬಂಗಾರ ಬೆಳೆಯುವ ವಿದ್ಯೆ ಕರಗತ

12:21 AM May 06, 2024 | Team Udayavani |

ದಾವಣಗೆರೆ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳುವಂತೆ ಒಂದು ಕಡೆ ಆಲೂ ಬೀಜ ಬಿತ್ತಿ, ಇನ್ನೊಂದು ಕಡೆ ಬಂಗಾರ ಬೆಳೆಯಬೇಕೆಂಬ ವಿದ್ಯೆಯನ್ನು ಡಿ.ಕೆ.ಶಿವಕುಮಾರ್‌ ಕರಗತ ಮಾಡಿಕೊಂಡಿದ್ದಾರೆ. ಅವರು ಈಗ ಆಲೂ ಬಿತ್ತಿ ಬಂಗಾರ ಬೆಳೆಯುವಂತಹವರು ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.

Advertisement

ಎಲ್ಲರೂ ಪಡೆದಿದ್ದಾರೆ ಚುನಾವಣ ಬಾಂಡ್‌
ಚುನಾವಣೆ ಬಾಂಡ್‌ನಿಂದ ಅತಿ ಹೆಚ್ಚು ದೇಣಿಗೆ ಪಡೆದಿರುವ ಬಿಜೆಪಿ ವಿಶ್ವದ ಅತಿ ಶ್ರೀಮಂತ ಪಕ್ಷವಾಗಿದೆ ಎಂದು ಪ್ರಿಯಾಂಕಾ ವಾದ್ರಾ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಹಿಂದೆಲ್ಲ ಚುನಾವಣೆಯಲ್ಲಿ ಕಪ್ಪು ಹಣ ಬಳಸಲಾಗುತ್ತಿರುವುದನ್ನು ತಪ್ಪಿಸಲು ಅರುಣ್‌ ಜೇಟಿÉ ಚುನಾವಣ ಬಾಂಡ್‌ ಯೋಜನೆಯನ್ನು ಪರಿಚಯಿಸಿದರು. ಈ ಬಾಂಡ್‌ಗಳಿಂದ ಬಿಜೆಪಿ ಶೇ.44ರಷ್ಟು ದೇಣಿಗೆ ಪಡೆದಿದ್ದರೆ, ಕಾಂಗ್ರೆಸ್‌, ಡಿಎಂಕೆ, ಆಪ್‌ ಸಹಿತ ಬಿಜೆಪಿಯೇತರ ಪಕ್ಷಗಳು ಶೇ.56ರಷ್ಟು ಪಡೆದಿವೆ. ಅವು ಪಡೆದ ದೇಣಿಗೆ ಭ್ರಷ್ಟಾಚಾರದ ಹಣ ಎಂದು ವಾಪಸ್‌ ನೀಡುತ್ತವೋ ಎಂದು ಪ್ರಶ್ನಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next