Advertisement

ಆರೋಗ್ಯ ಯೋಧರು: ಹೆತ್ತವರಿಗೆ ಸುಳ್ಳು ಹೇಳಿ, ಕೋವಿಡ್ ಹೋರಾಟಕ್ಕೆ

11:33 PM Apr 15, 2020 | Hari Prasad |

ಲಕ್ನೋದ ಕಿಂಗ್‌ ಜಾರ್ಜ್‌ ವೈದ್ಯಕೀಯ ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿ ವಿಭಾಗದಲ್ಲಿ ಪಿಎಚ್‌.ಡಿ. ಪೂರ್ಣಗೊಳಿಸಿ, ಆ ಯುವಕ 6 ತಿಂಗಳ ಹಿಂದಷ್ಟೇ ತೆಲಂಗಾಣದಲ್ಲಿನ ಸ್ವಗ್ರಾಮಕ್ಕೆ ಮರಳಿದ್ದರು. ತಮ್ಮ ಹೊಲದಲ್ಲಿ ದುಡಿಯುತ್ತಾ ಹೆತ್ತವರಿಗೆ ಸಹಾಯ ಮಾಡುತ್ತಿದ್ದ 29 ವರ್ಷದ ರಾಮಕೃಷ್ಣ ಅವರಿಗೆ ಇತ್ತೀಚೆಗೆ ವಿವಿಯ ಸಂಶೋಧನಾ ವಿಭಾಗದ ಗೈಡ್‌ನಿಂದ ಕರೆಯೊಂದು ಬಂತು. ಇದಾದ ಒಂದೇ ಗಂಟೆಯಲ್ಲಿ ರಾಮಕೃಷ್ಣ ಬಟ್ಟೆ-ಬರೆಯೊಂದಿಗೆ ಹೊರಟು ನಿಂತಿದ್ದರು.

Advertisement

ಅಪ್ಪ-ಅಮ್ಮನಿಗೆ ಆತಂಕ… ಯಾಕೆ, ಎಲ್ಲಿಗೆ ಹೋಗುತ್ತಿದ್ದಿಯಾ, ಯಾರದ್ದು ಫೋನ್‌ ಎಂಬ ಪ್ರಶ್ನೆಗಳ ಸುರಿಮಳೆ. ಸತ್ಯ ಹೇಳಿದರೆ ಹೆತ್ತವರು ಒಪ್ಪಲಿಕ್ಕಿಲ್ಲ ಎಂಬ ಭಾವನೆಯಿಂದ ರಾಮಕೃಷ್ಣ, ನಾನು ಹೈದರಾಬಾದ್‌ಗೆ ತೆರಳಿ ಗೆಳೆಯನ ಮನೆಯಲ್ಲಿ ಥೀಸೀಸ್‌ ಬರೆಯಲು ನಿರ್ಧರಿಸಿದ್ದೇನೆ ಎಂದು ಹೇಳಿ, ಹೇಗೋ ಕಷ್ಟಪಟ್ಟು ಹೋಗಿ ತಲುಪಿದ್ದು 1,500 ಕಿ.ಮೀ. ದೂರದ ಲಕ್ನೋಗೆ.

ಅಂದ ಹಾಗೆ, ರಾಮಕೃಷ್ಣಗೆ ಕರೆ ಬಂದಿದ್ದೇ ಲಕ್ನೋದಿಂದ. ಕೋವಿಡ್ 19 ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಸ್ಯಾಂಪಲ್‌ ಗಳ ಪರೀಕ್ಷೆಗೆ ಹೆಚ್ಚಿನ ಸಿಬ್ಬಂದಿಯ ಅಗತ್ಯವಿದ್ದು, ತಾವು ಕೂಡಲೇ ಹೊರಟುಬಂದರೆ ಬಹಳ ಸಹಾಯವಾಗುತ್ತದೆ ಎಂದು ಕರೆ ಮಾಡಿದ್ದ ಗೈಡ್‌ ತಿಳಿಸಿದ್ದರು. ಯುದ್ಧದ ಸಮಯದಲ್ಲಿ ಯೋಧರಿಗೆ ಕರೆ ಬಂದಂತೆ, ರಾಮಕೃಷ್ಣ ಅವರೂ ಹಿಂದೆ – ಮುಂದೆ ಯೋಚಿಸದೇ ತಕ್ಷಣ ಲಕ್ನೋಗೆ ತೆರಳಿದ್ದರು. ಇವರ ಕಾರ್ಯಕ್ಕೆ ಈಗ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next