Advertisement

ಕೊರೊನಾ ಆತಂಕ: ಶಾಸಕರಿಗೆ ಸ್ಯಾನಿಟೈಸರ್‌

11:26 PM Mar 10, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಾಗುತ್ತಿರುವಂತೆ ವಿಧಾನಸಭೆಯಲ್ಲಿ ಶಾಸಕರಿಗೆ ಕೈ ಸ್ವಚ್ಚವಾಗಿಟ್ಟುಕೊಳ್ಳಲು ಸ್ಯಾನಿಟೈಸರ್‌ (ಶುಚಿತ್ವ ದ್ರಾವಣ) ನೀಡಲಾಗುತ್ತಿದೆ. ಸೋಮವಾರ ರಾಜ್ಯದಲ್ಲಿ ಒಂದು ಕೊರೊನಾ ಪ್ರಕರಣ ಖಚಿತವಾಗಿತ್ತು.

Advertisement

ಮಂಗಳವಾರ ನಾಲ್ಕು ಪ್ರಕರಣಗಳು ಖಚಿತವಾಗಿರುವುದರಿಂದ ಶಾಸಕರೂ ಆತಂಕಗೊಂಡಿದ್ದು, ಅವರಿಗೆ ಶುಚಿತ್ವ ಕಾಪಾಡಿಕೊಳ್ಳಲು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಅದರಂತೆ ಅವರ ಕೈಗಳನ್ನು ಶುಚಿಯಾಗಿಟ್ಟುಕೊಳ್ಳಲು ಶುಚಿತ್ವ ದ್ರಾವಣ ನೀಡಲಾಯಿತು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಬಹುತೇಕ ಸದಸ್ಯರು ಮೊಗಸಾಲೆಯಲ್ಲಿ ಆಗಮಿಸಿ, ಶುಚಿತ್ವ ದ್ರಾವಣವನ್ನು ಕೈಗೆ ಹಚ್ಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next