Advertisement

Convict escapes: ಆಸ್ಪತ್ರೆಗೆ ಕರೆತರುವ ವೇಳೆ ಪೊಲೀಸ್‌ ಕಸ್ಟಡಿಯಿಂದ ಪರಾರಿಯಾದ ಅಪರಾಧಿ

09:21 AM Oct 15, 2023 | Team Udayavani |

ಭೋಪಾಲ್:‌ ಪೊಲೀಸ್‌ ಕಸ್ಟಡಿಯಿಂದ ಅಪರಾಧಿಯೊಬ್ಬ ಪರಾರಿ ಆಗಿರುವ ಘಟನೆ ಮಧ್ಯ ಪ್ರದೇಶದಲ್ಲಿ ಶನಿವಾರ(ಅ.14 ರಂದು) ನಡೆದಿದೆ.

Advertisement

ರಜತ್ ಸೈನಿ(29) ಪರಾರಿ ಆಗಿರುವ ಅಪರಾಧಿ.

ಅಪರಾಧಿ ರಜತ್ ಸೈನಿಯನ್ನು ಶನಿವಾರ ಮುಂಜಾನೆ ಕೇಂದ್ರ ಕಾರಾಗೃಹದಿಂದ ಹಮೀಡಿಯಾ ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾನೆ ಎಂದು ಕೊಹೆಫಿಜಾ ಪೊಲೀಸ್ ಠಾಣೆಯ ಉಸ್ತುವಾರಿ ವಿಜಯ್ ಸಿಂಗ್ ಸಿಸೋಡಿಯಾ ತಿಳಿಸಿದ್ದಾರೆ.

ಗುನಾ ಜಿಲ್ಲೆಯ ರಾಘೋಘರ್ ನಿವಾಸಿಯಾಹಗಿರುವ ಸೈನಿ ಅವರ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಕೊಲೆ ಪ್ರಕರಣವೊಂದರಲ್ಲಿ ಅವರಿಗೆ ನ್ಯಾಯಾಲಯವು ಮರಣದಂಡನೆ ವಿಧಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Road Mishap: ಕಂಟೈನರ್‌ಗೆ ಢಿಕ್ಕಿ ಹೊಡೆದ ಮಿನಿ ಬಸ್;‌ 12 ಮಂದಿ ದಾರುಣ ಅಂತ್ಯ

Advertisement

ತನ್ನ ಸ್ನೇಹಿತನನ್ನೇ ಕೊಂದು, ದೇಹವನ್ನು ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಸೈನಿಯನ್ನು ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಸದ್ಯ ಪೊಲೀಸರು ಪರಾರಿ ಆಗಿರುವ ಅಪರಾಧಿ ಸೈನಿಯನ್ನು ಪತ್ತೆ ಹಚ್ಚಲು ಮುಂದಾಗಿದ್ದು, ಕರ್ತವ್ಯ ಲೋಪ ಎಸಗಿದ ಇಬ್ಬರು ಸಿಬ್ಬಂದಿಯನ್ನು ಜೈಲು ಇಲಾಖೆ ಅಮಾನತು ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next