Advertisement

ಭಾರತದ ಕಾನೂನು ಉಲ್ಲಂಘಿಸಿದರೆ ವಿದೇಶಿ ಪತ್ರಕರ್ತರಿಗೆ ನಿರ್ಬಂಧ

01:10 AM Dec 29, 2018 | |

ನವದೆಹಲಿ: ವಿದೇಶದ ಎಲ್ಲಾ ಪತ್ರಕರ್ತರೂ ಭಾರತದ ಕಾನೂನು ಗೌರವಿಸಬೇಕು. ಆ ರೀತಿ ನಡೆದುಕೊಳ್ಳದವರ ವಿರುದ್ಧ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಗೃಹ ಖಾತೆ ಶುಕ್ರವಾರ ಎಚ್ಚರಿಕೆ ನೀಡಿದೆ. 

Advertisement

ರಾಯಿಟರ್ಸ್‌ ಸುದ್ದಿ ಸಂಸ್ಥೆ ಪತ್ರಕರ್ತರೊಬ್ಬರಿಗೆ ವೀಸಾ ನಿರಾಕರಿಸಲಾಗಿರುವ ಪ್ರಕರಣದ ಹಿನ್ನೆಲೆಯಲ್ಲಿ ಗೃಹ ಖಾತೆಯ ಹಿರಿಯ ಅಧಿಕಾರಿ ಈ ಸ್ಪಷ್ಟನೆ ನೀಡಿದ್ದಾರೆ. ಕಾನೂನಿನ ಅನ್ವಯ ಶಿಕ್ಷೆ ನೀಡುತ್ತೇವೆ ಎಂದರೆ, ವಿದೇಶಿ ಪತ್ರಕರ್ತರನ್ನು ಕಪ್ಪುಪಟ್ಟಿಗೆ ಸೇರಿಸುವುದು ಎಂಬ ಅರ್ಥವಲ್ಲ ಎಂದು ಹೇಳಿದ್ದಾರೆ. 

ವೀಸಾ ಉಲ್ಲಂಘನೆ ನಿಯಮದ ಕಾರಣಕ್ಕಾಗಿ ಪತ್ರಕರ್ತನನ್ನು ವಿಮಾನ ನಿಲ್ದಾಣದಿಂದಲೇ ವಾಪಸ್‌ ಕಳುಹಿಸಲಾಗಿತ್ತು. ಅದು ಶಾಶ್ವತ ನಿಷೇಧವಲ್ಲ. 6 ತಿಂಗಳು ಅಥವಾ 1 ವರ್ಷದ ಬಳಿಕ ಅದನ್ನು ಪರಿಶೀಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next