Advertisement

ಕಾಸರಗೋಡು ಜಿಲ್ಲೆಯ ನಿರಂತರ ಅವಗಣನೆ : ಶ್ರೀಕಾಂತ್‌

04:26 PM Mar 06, 2017 | |

ಕಾಸರಗೋಡು: ಶುಕ್ರವಾರ ಕೇರಳ ವಿಧಾನ ಸಭೆಯಲ್ಲಿ ಮಂಡಿಸಿಲ್ಪಟ್ಟ ಮುಂಗಡ ಪತ್ರದಲ್ಲಿ ಕಾಸರಗೋಡು ಜಿಲ್ಲಾ ವಾಸಿಗಳ ಕನಸಾದ ಉಕ್ಕಿನಡ್ಕ ಮೆಡಿಕಲ್‌ ಕಾಲೇಜಿಗೆ ಚಿಕ್ಕಾಸೂ ನೀಡದೆ ಇರುವುದು ಖಂಡನಾರ್ಹ. ಇದು ಕಾಸರಗೋಡು ಜಿಲ್ಲೆಯ ಅವಗಣನೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌ ಅವರು ಪಿಣರಾಯಿ ಸರಕಾರದ ವಿರುದ್ಧ ಗುಡುಗಿದರು.

Advertisement

ಶನಿವಾರ ಸಂಜೆ ಬದಿಯಡ್ಕದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ನಡೆದ “ಅನುದಾನವೆಲ್ಲಿ ಪಿಣರಾಯಿ’ ಮೆರವಣಿಗೆ ಯನ್ನು ಉದ್ಘಾಟಿಸಿ ಮಾತನಾಡಿದರು. ಕಾಸರಗೋಡು ಜಿಲ್ಲೆಯು ಎಂಡೋ ಸಲ್ಫಾನ್‌ ಪೀಡಿತ ಪ್ರದೇಶವಾಗಿದ್ದು, ಇಲ್ಲಿ ಆಗಲೇ ಬೇಕಾದ ಮೆಡಿಕಲ್‌ ಕಾಲೇಜಿನ ಬಗ್ಗೆ ಚಕಾರವೆತ್ತದ ಸರಕಾರದ ಧೋರಣೆ ಸರಿಯಲ್ಲ. ಮುಂದೆ ನಿರಂತರ ಹೋರಾಟದ ಮೂಲಕ ಸರಕಾರದ ನಡೆಯನ್ನು ಪ್ರಶ್ನಿಸಲಿದ್ದೇವೆ ಎಂದರು.

ಬಿಜೆಪಿ ನೇತಾರರಾದ ಹರೀಶ್‌ ನಾರಂಪಾಡಿ, ರಾಮಪ್ಪ ಮಂಜೇಶ್ವರ, ಅವಿನಾಶ್‌ ವಿ.ರೈ, ಮೈರ್ಕಳ ನಾರಾಯಣ ಭಟ್‌, ಬಾಲಕೃಷ್ಣ ಶೆಟ್ಟಿ ಕಡಾರು, ಲಕ್ಷ್ಮೀ ನಾರಾಯಣ ಪೈ, ವಿಶ್ವನಾಥ ಪ್ರಭು, ಗಣೇಶ್‌ ಬಿ. ಹಾಗೂ ಪಕ್ಷದ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next