Advertisement

ಕಂಟೈನ್ಮೆಂಟ್‌ ವಲಯ, ಸೀಲ್‌ಡೌನ್‌ ಪ್ರದೇಶದ ಹೊಣೆಗಾರಿಕೆ ಡಿಸಿಪಿಗಳಿಗೆ: ಬಸವರಾಜ ಬೊಮ್ಮಾಯಿ

07:44 PM Jul 01, 2020 | Sriram |

ಬೆಂಗಳೂರು: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಹಾಗೂ ಜನ -ವಾಹನ ಸಂಚಾರ ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಕಂಟೈನ್ಮೆಂಟ್‌ ವಲಯ, ಸೀಲ್‌ಡೌನ್‌ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿ ಹೊಣೆಗಾರಿಕೆ ಆಯಾ ಡಿಸಿಪಿಗಳಿಗೆ ನೀಡಲಾಗುವುದು. ವಿದೇಶದಿಂದ ಬಂದವರ ಕ್ವಾರಂಟೈನ ಮಾಡುವ ಮಾದರಿಯಲ್ಲೇ ಆ ಪ್ರದೇಶಗಳಲ್ಲಿ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಧಾನಸೌದದಲ್ಲಿ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸಭೆಯ ನಂತರ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಬಿಬಿಎಂಪಿ, ಪೊಲೀಸ್‌ ಇಲಾಖೆ, ಗೃಹರಕ್ಷಕದಳ, ಸ್ವಯಂ ಸೇವಕರು ಸಮನ್ವಯತೆಯಿಂದ ಕೆಲಸ ಮಾಡುವ ಸಂಬಂಧ ರೂಪು-ರೇಷೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಪರಿಸ್ಥಿತಿಯಲ್ಲಿ ಕಂಟೈನ್‌ಮೆಂಟ್‌ ವಲಯಗಳು, ಸೀಲ್‌ಡೌನ್‌ ಪ್ರದೇಶಗಳಲ್ಲಿ ಬಿಬಿಎಂಪಿ, ಪೊಲೀಸ್‌ ಇಲಾಖೆ ಸಿಬ್ಬಂದಿ ಜತೆಗೆ ಗೃಹ ರಕ್ಷಕರನ್ನೂ ತೆಗೆದುಕೊಳ್ಳುತ್ತೇವೆ.

ವಿದೇಶದಿಂದ ಬಂದಾಗ ಹೋಂ ಕ್ವಾರಂಟೈನ್‌ ಮಾಡಿದ್ದೆವೋ ಅದೇ ರೀತಿ ಮಾಡಬೇಕು. ಕಂಟೈನ್ಮೆಂಟ್‌ ವಲಯಗಳಲ್ಲಿ ನಿಗಾ ವಹಿಸಬೇಕು ಎಂದು ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

Advertisement

ಮುಂಬರುವ ದಿನಗಳಲ್ಲಿ ಹೋಂ ಕ್ವಾರಂಟೈನ್‌ ಮಹತ್ವ ಪಡೆದುಕೊಳ್ಳುವುದರಿಂದ ಹೋಂ ಕ್ವಾರಂಟೈನ್‌ ವ್ಯವಸ್ಥೆಯಲ್ಲಿ ಸಮುದಾಯವನ್ನು ಭಾಗಿಯಾಗಿಸಬೇಕು. ವಾರ್ಡ್‌ವೈಸ್‌ ಬಿಬಿಎಂಪಿ ಪೊಲೀಸ್‌, ಗೃಹರಕ್ಷಕ ದಳ, ಸ್ವಯಂ ಸೇವಕರು ಸಮನ್ವಯತೆಯಿಂದ ಕೆಲಸ ಮಾಡಬೇಕು. ಆಸ್ಪತ್ರೆ, ವೈದ್ಯರ ಜೋಡಣೆ, ಅವರ ಚಲನವಲನ, ಅಕ್ಕ ಪಕ್ಕದವರನ್ನು ಜಾಗೃತಿಗೊಳಿಸುವುದು. ಹೋಂ ಕ್ವಾರಂಟೈನ್‌ ಆಗಿರುವವರಿಗೆ ಆ್ಯಪ್‌ ಜೋಡಣೆಯಾಗಿರುತ್ತದೆ. ಅದರ ಮಾಹಿತಿಯೂ ಪೊಲೀಸರಿಗೆ ಇರಬೇಕು ಎಂದು ಹೇಳಿದರು.

ರಾತ್ರಿ ಕರ್ಫ್ಯೂ 8 ರಿಂದ 5 ಗಂಟೆವರೆಗೂ ಜನ ವಾಹನ ಸಂಚಾರ ನಿಲ್ಲಿಸಬೇಕು. ಈ ಬಗ್ಗೆ ಜನರಲ್ಲೂ ಜಾಗೃತಿ ಮೂಡಿಸಲಾಗುವುದು. 600 ಆಟೋ ರಿಕ್ಷಾದಲ್ಲಿ ರಾತ್ರಿ ಕರ್ಫ್ಯೂ ಜಾರಿ, ಮಾಸ್ಕ್ ಧರಿಸದಿದ್ದರೆ ದಂಡ, ಸೀಲ್‌ಡೌನ್‌ ಪ್ರದೇಶಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ತಿಳಿಸಲಾಗುವುದು ಎಂದರು.

ರಾತ್ರಿ ಕರ್ಫ್ಯೂ ಕಟ್ಟು ನಿಟ್ಟಿನ ಪಾಲನೆಯಾಗಲಿದ್ದು ಜನ-ವಾಹನ ಓಡಾಟದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೋವಿಡ್-19 ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ಪೊಲೀಸ್‌ ಇಲಾಖೆ ಮೇಲೆಯೂ ಹೆಚ್ಚಿನ ಹೊಣೆಗಾರಿಕೆ ಇದೆ ಎಂದು ಹೇಳಿದರು.

ಕೋವಿಡ್-19 ಸೇವೆಗೆ ಸಂಘ-ಸಂಸ್ಥೆಗಳು ಕೋವಿಡ್-19 ಸ್ವಯಂ ಸೇವಕರು 60 ಸಾವಿರ ನೋಂದಣಿಯಾಗಿದ್ದಾರೆ. ಅವರಿಗೆ ಸಂಪೂರ್ಣವಾಗಿ ಜವಾಬ್ದಾರಿ ಕೊಟ್ಟು ವಾರ್ಡ್‌ನಲ್ಲಿ ಬಳಕೆ ಮಾಡಬೇಕು ಎಂಬ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಕಂಟೈನ್ಮೆಂಟ್‌ ವಲಯ, ಸೀಲ್‌ಡೌನ್‌ ಪ್ರದೇಶಗಳು ಹೆಚ್ಚಾಗುತ್ತಿರುವುದು ಲಾಕ್‌ಡೌನ್‌ ಅಗತ್ಯವೇ ಎಂಬ ಪ್ರಶ್ನೆಗೆ ಸೀಲ್‌ಡೌನ್‌ ಎಂದರೆ ಲಾಕ್‌ಡೌನ್‌ ಅಲ್ಲ ಎಂದು ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next