Advertisement

ಕಾಂಗ್ರೆಸ್‌ನಿಂದಲೂ ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ಸಂಗ್ರಹ!

10:53 PM Feb 02, 2021 | Team Udayavani |

ಜೈಪುರ: ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಈಗಾಗಲೇ ಸಂಘ ಪರಿವಾರ ದೇಣಿಗೆ ಸಂಗ್ರಹ ನಡೆಸುತ್ತಿದೆ. ಏತನ್ಮಧ್ಯೆ, ರಾಜಸ್ಥಾನದಲ್ಲಿ ಕಾಂಗ್ರೆಸ್‌ ಪಕ್ಷದ ವಿದ್ಯಾರ್ಥಿ ಸಂಘಟನೆ ಎನ್ಎಸ್‌ಯುಐ ಕೂಡ ದೇಣಿಗೆ ಸಂಗ್ರಹ ಆರಂಭಿಸಿದೆ!

Advertisement

ಜೈಪುರದ ನೆಹರು ರಸ್ತೆಯ ವಾಣಿಜ್ಯ ಕಾಲೇಜಿನಲ್ಲಿ ಎನ್‌ಎಸ್‌ಯುಐ “ರಾಮನ ಹೆಸರಿನಲ್ಲಿ 1 ರೂ.’ ಅಭಿಯಾನಕ್ಕೆ ಮಂಗಳವಾರದಿಂದ ಚಾಲನೆ ನೀಡಿದೆ. ಮೊದಲ ದಿನವೇ 3 ಸೀಲ್ಡ್‌ ಬಾಕ್ಸ್‌ಗಳು ಭರ್ತಿಯಾಗಿದ್ದು, 100 ಸದಸ್ಯರನ್ನೊಳಗೊಂಡ ತಂಡ ದೇಣಿಗೆ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿತ್ತು.

“ರಾಜ್ಯದ ಎಲ್ಲ ಕಾಲೇಜುಗಳಲ್ಲಿ 15 ದಿನಗಳವರೆಗೆ ಈ ಅಭಿಯಾನ ನಡೆಯಲಿದೆ. ಸಂಗ್ರಹಗೊಂಡ ಹಣವನ್ನು ಅಯೋಧ್ಯೆ ಶ್ರೀರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ನೀಡಲಾಗುವುದು’ ಎಂದು ಎನ್‌ಎಸ್‌ಯುಐ ವಕ್ತಾರ ರಮೇಶ್‌ ಭಾಟಿ ತಿಳಿಸಿದ್ದಾರೆ.

ಇದನ್ನೂ ಓದಿ:ಹೊಲದಲ್ಲಿ ಬಿದ್ದಿದ್ದ ನಿರ್ಗತಿಕನ ಶವ ಹೊತ್ತು 1 ಕಿ.ಮಿ. ಸಾಗಿದ ಮಹಿಳಾ ಎಸ್‌ಐ

Advertisement

Udayavani is now on Telegram. Click here to join our channel and stay updated with the latest news.

Next