Advertisement

ಕಾಂಗ್ರೆಸ್‌ ವಿರೋಧ

09:32 AM Aug 04, 2018 | Team Udayavani |

ಹೊಸದಿಲ್ಲಿ:  ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಪ್ರಸ್ತಾಪವನ್ನು ನಾವು ಖಡಾಖಂಡಿತವಾಗಿ ವಿರೋಧಿಸುತ್ತೇವೆ ಎಂದು ಶುಕ್ರವಾರ ಕಾನೂನು ಆಯೋಗಕ್ಕೆ ಕಾಂಗ್ರೆಸ್‌ ಸ್ಪಷ್ಟಪಡಿಸಿದೆ. ಏಕಕಾಲದ ಚುನಾವಣೆಯು ಭಾರತದ ಒಕ್ಕೂಟ ವ್ಯವಸ್ಥೆಯ ಮೂಲ ರಚನೆಗೆ ವಿರುದ್ಧವಾದದ್ದು ಎಂದೂ ತಿಳಿಸಿದೆ.
ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಚಿದಂಬರಂ, ಕಪಿಲ್‌ ಸಿಬಲ್‌,  ಆನಂದ್‌ ಶರ್ಮಾ ನೇತೃತ್ವದ ನಿಯೋಗವು ಆಯೋಗದ ಹಿರಿಯ ಅಧಿಕಾರಿ ಗಳನ್ನು ಭೇಟಿ ಮಾಡಿ ಕಾಂಗ್ರೆಸ್‌ನ ನಿಲುವನ್ನು ಸ್ಪಷ್ಟಪಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next