Advertisement

ಮೋಡದಿಂದ ರಾಡಾರ್‌ಗಳಿಗೆ ಅಡ್ಡಿ ಆಗುತ್ತವೆ ಎಂದ ಏರ್‌ ಮಾರ್ಷಲ್‌

10:59 PM May 27, 2019 | Team Udayavani |

ಭಟಿಂಡಾ: ಬಾಲಕೋಟ್‌ ದಾಳಿ ವೇಳೆ ಮೋಡಗಳು ರಾಡಾರ್‌ಗೆ ಅಡ್ಡಿಪಡಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಏರ್‌ ಮಾರ್ಷಲ್‌ ರಘುನಾಥ್‌ ನಂಬಿಯಾರ್‌ ಸಮರ್ಥಿಸಿಕೊಂಡಿದ್ದಾರೆ. ತುಂಬಾ ಮೋಡವಿದ್ದಾಗ ಮತ್ತು ಪ್ರತಿಫ‌ಲನ ಸನ್ನಿವೇಶದಲ್ಲಿ ರಾಡಾರ್‌ಗಳು ಸಂಕೇತ ಗಳನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ವಿಫ‌ಲ ವಾಗುತ್ತವೆ ಎಂದು ನಂಬಿಯಾರ್‌ ಹೇಳಿದ್ದಾರೆ.

Advertisement

ಕೆಲವೇ ದಿನಗಳ ಹಿಂದೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟಿವಿ ವಾಹಿನಿಗೆ ಸಂದರ್ಶನ ನೀಡುವಾಗ ಮೋದಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಮೋಡ ಹಾಗೂ ಮಳೆಯಾಗುತ್ತಿದ್ದು ದರಿಂದ ದಾಳಿಯನ್ನು ಮುಂದೂಡುವ ಬಗ್ಗೆ ಸೇನಾ ಮುಖ್ಯಸ್ಥರು ಚಿಂತಿಸುತ್ತಿ ದ್ದರು. ಆದರೆ ಮೋಡ ಹಾಗೂ ಮಳೆಯಾಗುತ್ತಿದ್ದಾಗ ರಾಡಾರ್‌ಗಳು ಸರಿ ಯಾಗಿ ಕೆಲಸ ಮಾಡದೇ ನಮಗೆ ಅನುಕೂಲ ಒದಗಿಸಬಹುದು ಎಂದು ನಾನು ಐಡಿಯಾ ಕೊಟ್ಟೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಮೋದಿ ಹೇಳಿಕೆಯನ್ನು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಕೂಡ ರವಿವಾರ ಸಮರ್ಥಿಸಿದ್ದರು. ರಾಡಾರ್‌ ಗಳು ವಿಭಿನ್ನ ತಂತ್ರಜ್ಞಾನವನ್ನು ಆಧರಿಸಿ ಕೆಲಸ ಮಾಡುತ್ತವೆ. ಕೆಲವು ಮೋಡವನ್ನೂ ಭೇದಿಸಿ ಸಂಕೇತ ಸ್ವೀಕರಿ ಸುವ ಸಾಮರ್ಥ್ಯ ಹೊಂದಿರುತ್ತವೆ. ಕೆಲವು ರಾಡಾರ್‌ಗಳು ಈ ಸಾಮರ್ಥ್ಯ ಹೊಂದಿರುವುದಿಲ್ಲ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next