Advertisement

ನಗರಸಭೆಯಿಂದ ಅಕ್ರಮ ಮಳಿಗೆಗಳ ತೆರವು

11:31 AM Mar 14, 2021 | Team Udayavani |

ಕನಕಪುರ: ನಗರದಲ್ಲಿ ಅಕ್ರಮವಾಗಿ ತಲೆಯೆತ್ತಿದ್ದ ಅಂಗಡಿ ಮಳಿಗೆಗಳನ್ನು ನಗರಸಭೆ ಅಧ್ಯಕ್ಷ ಮುಕ್ಬೂಲ್‌ ಪಾಷಾ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

Advertisement

ಶನಿವಾರ ಬೆಳ್ಳಂಬೆಳಗ ನಗರಸಭೆ ಅಧ್ಯಕ್ಷ ಮಕ್ಭೂಲ್‌ ಪಾಷಾ ಸಿಬ್ಬಂದಿಯೊಂದಿಗೆ ತೆರವು ಕಾರ್ಯಾಚರಣೆಗೆ ಇಳಿದಿದ್ದರು. ನಗರದ ನಗರಸಭೆ ಸ್ಥಳ ಮತ್ತು ಪಾದಚಾರಿ ರಸ್ತೆಗಳನ್ನು ಆಕ್ರಮಿಸಿಕೊಂಡು ಪರವಾನಗಿ ಇಲ್ಲದೆ ಅಂಗಡಿ ಮಳಿಗೆಗಳನ್ನು ತೆರೆದು ಮತ್ತೂಬ್ಬರಿಗೆ ಬಾಡಿಗೆಗೆ ಕೊಟ್ಟು ಹಣ ಮಾಡುತ್ತಿದ್ದವ‌ರಿಗೆ ಬಿಸಿ ಮುಟ್ಟಿಸಿದ್ದಾರೆ. ಹಲವು ವರ್ಷಗಳಿಂದ ನಗರಸಭೆ ಜಾಗ ಮತ್ತು ಪಾದಚಾರಿ ರಸ್ತೆಗಳನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಬ್ಬಿಣ ಮತ್ತು ಮರದಲ್ಲಿ ನಿರ್ಮಾಣ ಮಾಡಿದ ಪೆಟ್ಟಿಗೆ ಅಂಗಡಿಗಳನ್ನು ತೆರೆದು ಕಬ್ಬಿನ ರಸ, ಎಳನೀರು ಮಾರಾಟ ಮಾಡುವ ವ್ಯಾಪಾರಿಗಳಿಗೆ ಕೊಟ್ಟು ಬಾಡಿಗೆ ಪಡೆಯುವ ದಂಧೆ ಮಾಡಿಕೊಂಡಿದ್ದರು.  ಈ ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ಪಡೆದ ವ್ಯಾಪಾರಿಗಳು ಉತ್ಪತ್ತಿಯಾಗುವ ತಾಜ್ಯವನ್ನು ಪಕ್ಕದಲ್ಲಿದ್ದ ಚರಂಡಿಗೆ ಸುರಿಯುತ್ತಿದ್ದರು. ಇದರಿಂದ ಚರಂಡಿಗಳಲ್ಲಿ ನೀರು ಶೇಖರಣೆಯಾಗಿ ದುರ್ವಾಸನೆ ಬೀರುವುದರ ಜೊತೆಗೆ ಮಳೆಗಾಲದಲ್ಲಿ ಚರಂಡಿಗಳಲ್ಲಿ ತ್ಯಾಜ್ಯ ಕಟ್ಟಿಕೊಂಡು ನೀರು ಮುಂದೆ ಹರಿದು ಹೋಗಲು ಜಾಗವಿಲ್ಲದೆ ರಸ್ತೆಯ ಮೇಲೆ ಹರಿಯುತ್ತಿತ್ತು.

ದಿನಕಳೆದಂತೆ ಅಕ್ರಮವಾಗಿ ರಸ್ತೆ ಬದಿ ಮತ್ತು ಫ‌ುಟ್‌ಪಾತ್‌ಗಳಲ್ಲಿ ನಾಯಿ ಕೊಡೆಗಳಂತೆ ತಲೆಯೆತ್ತಿರುವ ಅಂಗಡಿ ಮಳಿಗೆ ಮತ್ತು ಫ‌ುಟ್‌ಪಾತ್‌ ವ್ಯಾಪಾರಸ್ಥರನ್ನು ತೆರವು ಗೊಳಿಸಬೇಕು ಎಂಬ ಬೇಡಿಕೆ ಇಂದು ನಿನ್ನೆಯದಲ್ಲ ಹಲವು ಸಭೆಗಳಲ್ಲಿ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಹತ್ತಾರು ಬಾರಿ ಮನವಿ ಮಾಡಿದ್ದರು. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಗರಸಭೆ ಅಧ್ಯಕ್ಷ ಮಕ್ಬೂಲ್‌ ಪಾಷಾ ಅಧಿಕಾರಿಗಳ ಕ್ರಮಕ್ಕೆ ಕಾಯದೆ ಅಧಿಕಾರಿಗಳಿಗೆ ಯಾವುದೇ ಸುಳಿವನ್ನು ನೀಡದೆ ಫ‌ುಟ್‌ಪಾತ್‌ ಮತ್ತು ಪಾದಚಾರಿ ರಂಗಸ್ಥಳಲ್ಲಿ ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವ ಮಾಲಿಕರಿಗೆ ತೆರವುಗೊಳಿಸುವಂತೆ ನೋಟಿಸ್‌ ನೀಡಿದರೂ‌ ಯಾರೊಬ್ಬರೂ ಅಂಗಡಿಗಳನ್ನು ತೆರವುಗೊಳಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ನಗರದ ಎಂಎಚ್‌ಎಸ್‌ ರಸ್ತೆಯಲ್ಲಿರುವ ಜನತಾದಳ ಮತ್ತು ಕಾಂಗ್ರೆಸ್‌ ವಿವಾದಿತಸ್ಥಳದಲ್ಲಿ ಮತ್ತು ಮಳಗಾಳು ರಸ್ತೆಯಲ್ಲಿದ್ದ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಬಿಸಿ ಮುಟ್ಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next