Advertisement

Chitradurga ; ಸರಕಾರಿ ಬಸ್ ಕಂಡಕ್ಟರ್ ಗೆ ಥಳಿತ: ಅನುಚಿತ ವರ್ತನೆ ಆರೋಪ!

03:33 PM Jun 22, 2023 | Team Udayavani |

ಚಿತ್ರದುರ್ಗ: ನಗರದ ಚಳ್ಳಕೆರೆ ಪಟ್ಟಣದಲ್ಲಿ ಸರಕಾರಿ ಬಸ್ ನಿರ್ವಾಹಕರೊಬ್ಬರ ಮೇಲೆ‌, ಪ್ರಯಾಣಕಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಮಾಡಿ ಥಳಿಸಿದ ಘಟನೆ ಗುರುವಾರ ನಡೆದಿದೆ.

Advertisement

ಚಳ್ಳಕೆರೆ ಪಟ್ಟಣದ ನೆಹರು ವೃತ್ತದಲ್ಲಿ ಘಟನೆ ನಡೆದಿದ್ದು, ರಾಯದುರ್ಗ – ಬೆಂಗಳೂರು ಬಸ್ ನಿರ್ವಾಹಕ ಚಂದ್ರೇಗೌಡ ಎಂಬವರ ಮೇಲೆ‌ ಹಲ್ಲೆ ನಡೆಸಲಾಗಿದೆ. ಬುಧವಾರ ಚಳ್ಳಕೆರೆಯಿಂದ ಇದೇ ಬಸ್ ನಲ್ಲಿ ದಾಬಸ್ ಪೇಟೆಗೆ ಓರ್ವ ಮಹಿಳೆ ಪ್ರಯಾಣಿಸಿದ್ದು, ದಾಬಸ್ ಪೇಟೆ ಬಳಿ ಬಸ್ ನಿಲ್ಲಿಸಲು ನಿರ್ವಾಹಕ ಚಂದ್ರೇಗೌಡ ಒಪ್ಪಿರಲಿಲ್ಲ ಎಂದು ಹೇಳಲಾಗಿದೆ.

ಮೆಜೆಸ್ಟಿಕ್ ಬಸ್ ಸ್ಟಾಪ್ ನಲ್ಲಿ ಪ್ರಶ್ನಿಸಿದ ಮಹಿಳೆ ಜತೆ ನಿರ್ವಾಹಕ ಚಂದ್ರೇಗೌಡ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಇಂದು ಚಳ್ಳಕೆರೆ‌ ಬಸ್ ನಿಲ್ದಾಣ ಬಳಿ ಮಹಿಳೆಯ ಸಂಬಂಧಿಕರೆಲ್ಲ ಒಟ್ಟಾಗಿ ಕಾದು ಥಳಿಸಿದ್ದಾರೆ. ಮೊಬೈಲ್ ಫೋನನ್ನು ಒಡೆದು ಹಾಕಿದ್ದಾರೆ. ಥಳಿತಕ್ಕೊಳಗಾದ ಬಸ್ ನಿರ್ವಾಹಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next