Advertisement

ಚಳ್ಳಕೆರೆಯಿಂದ ಮಣಿಪಾಲ್‌ಗೆ ಬಸ್‌ ಸಂಚಾರ

12:25 PM Jun 25, 2020 | Naveen |

ಚಿತ್ರದುರ್ಗ: ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗದ ಚಳ್ಳಕೆರೆಯಿಂದ ಮಣಿಪಾಲಕ್ಕೆ ಜೂ. 25 ರಿಂದ ಎಕ್ಸ್‌ಪ್ರೆಸ್‌ ಬಸ್‌ ಸೇವೆ ಪುನರಾರಂಭ ಮಾಡಲಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್‌ ತಿಳಿಸಿದ್ದಾರೆ.

Advertisement

ಈ ಬಸ್‌ ಹೊಳಲ್ಕೆರೆ, ಚನ್ನಗಿರಿ, ಶಿವಮೊಗ್ಗ, ತೀರ್ಥಹಳ್ಳಿ, ಕುಂದಾಪುರ, ಉಡುಪಿ ಮಾರ್ಗದಲ್ಲಿ ದಿನನಿತ್ಯ ಕಾರ್ಯಚರಣೆ ನಡೆಸಲಿದೆ. ಕೋವಿಡ್‌ ಲಾಕ್‌ಡೌನ್‌ ಘೋಷಣೆಯಾಗಿದ್ದ ಕಾರಣ ಈ ಹಿಂದೆ ಚಾಲನೆಯಲ್ಲಿದ್ದ ಈ ಮಾರ್ಗದ ಬಸ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಜೂ. 25 ರಿಂದ ಪುನರಾರಂಭಿಸಿದ್ದು ಪ್ರತಿದಿನ ಚಳ್ಳಕೆರೆಯಿಂದ ಸಂಜೆ 7.15 ಗಂಟೆಗೆ ಹೊರಡುವ ಬಸ್‌ ಹೊಳಲ್ಕೆರೆ, ಚನ್ನಗಿರಿ, ಶಿವಮೊಗ್ಗ, ತೀರ್ಥಹಳ್ಳಿ, ಕುಂದಾಪುರ ಮಾರ್ಗವಾಗಿ ಬೆಳಗಿನ ಜಾವ 4-30 ಗಂಟೆಗೆ ಉಡುಪಿ ತಲುಪಲಿದೆ.

ಪುನಃ ಮಣಿಪಾಲ್‌ನಿಂದ ಸಂಜೆ 6 ಗಂಟೆಗೆ ಹೊರಡುವ ಬಸ್‌ ಉಡುಪಿ, ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಚನ್ನಗಿರಿ, ಹೊಳಲ್ಕೆರೆ ಮಾರ್ಗವಾಗಿ ಚಳ್ಳಕೆರೆಗೆ ಬೆಳಿಗ್ಗೆ 3:15ಕ್ಕೆ ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next