Advertisement

Chikmagalur: ಕಾನೂನು ಎಲ್ಲರಿಗೂ ಒಂದೇ: ದರ್ಶನ್‌ ವಿಚಾರಕ್ಕೆ ಶಾಸಕ ರಾಜೇಗೌಡ ಪ್ರತಿಕ್ರಿಯೆ

04:05 PM Aug 26, 2024 | Team Udayavani |

ಚಿಕ್ಕಮಗಳೂರು: ಸಂವಿಧಾನ, ಕಾನೂನು ಚೌಕಟ್ಟಿನಡಿಯಲ್ಲಿ ಖೈದಿಗೆ ಕೊಡುವ ಸವಲತ್ತುಗಳ ಬಗ್ಗೆ ಸ್ಪಷ್ಟತೆಯಿದೆ. ಅದನ್ನು ಮೀರಿ ಸೌಲಭ್ಯ ಕೊಟ್ಟರೆ ಅದು ತಪ್ಪು ಎಂದು ಕೊಲೆ ಆರೋಪಿ ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ಪ್ರಕರಣ ಕುರಿತು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಪ್ರತಿಕ್ರಿಯಿಸಿದರು.

Advertisement

ಸೋಮವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಜೈಲಿನಲ್ಲಿ ಕಾನೂನು ಮೀರಿ ನೀಡುವಂತಹ ಸೌಲಭ್ಯಗಳಿಗೆ ನನ್ನ ವಿರೋಧವಿದೆ. ಎಷ್ಟೇ ದೊಡ್ಡ ಮನುಷ್ಯನಾದರೂ ಕೂಡ ಕಾನೂನು ಮೀರಿ ವಿಶೇಷ ಸೌಲಭ್ಯ ನೀಡಿದರೆ ಅದು ತಪ್ಪು ಎಂದರು.

ಕಾನೂನು ಎಲ್ಲರಿಗೂ ಒಂದೇ. ಅದು ದರ್ಶನ್ ಗೂ ಪಾಲನೆಯಾಗಬೇಕು. ಜನ ಸಾಮಾನ್ಯರು, ಪ್ರಧಾನಮಂತ್ರಿ, ಮುಖ್ಯಮಂತ್ರಿ ಯಾರೇ ಆದರೂ ಎಲ್ಲರಿಗೂ ಒಂದೇ ಕಾನೂನು ಎಂದರು

Advertisement

Udayavani is now on Telegram. Click here to join our channel and stay updated with the latest news.

Next