Advertisement

ಚಿಕ್ಕರಸಿನಕೆರೆ ಗ್ರಾಪಂ ಕಚೇರಿ ಸುತ್ತ ಅಶುಚಿತ್ವ ತಾಂಡವ

03:05 PM May 31, 2018 | |

ಭಾರತೀನಗರ: ಪಂಚಾಯ್ತಿ ಸುತ್ತ ಬೆಳೆದ ಗಿಡಗಂಟಿಗಳು, ಚರಂಡಿಯೊಳಗೆ ತುಂಬಿಕೊಂಡ ಹೂಳು, ದುರ್ವಾಸನೆ, ಅನೈರ್ಮಲ್ಯ. ಇದು ಇಲ್ಲಿಗೆ ಸಮೀಪದ ಚಿಕ್ಕರಸಿನ ಗ್ರಾಪಂ ಕಚೇರಿ ಸುತ್ತಲಿನ ಕೆಟ್ಟ ವಾತಾವರಣದ ಸ್ಥಿತಿ.

Advertisement

ಸ್ವತ್ಛತೆ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವ ಗ್ರಾಪಂ ಆಡಳಿತಾಧಿಕಾರಿಗಳು ಸ್ವತಃ ತಮ್ಮ ಪಂಚಾಯ್ತಿ ಸುತ್ತ ಶುಚಿಯಾಗಿಟ್ಟುಕೊಳ್ಳುವಲ್ಲೂ ವಿಫ‌ಲರಾಗಿದ್ದಾರೆ. ಇಲ್ಲಿನ ಶ್ರೀ ಕಾಲಭೈರವೇಶ್ವರ ದೇವಾಲಯ ರಾಜ್ಯದಲ್ಲೇ ಪ್ರಸಿದ್ಧಿಗೊಂಡಿದೆ. ಆದರೆ, ಗ್ರಾಮ ಮಾತ್ರ ಗ್ರಾಪಂ ನಿರ್ಲಕ್ಷ್ಯದಿಂದಾಗಿ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿದೀಪ ಇತರೆ ಸೌಲಭ್ಯಗಳಿಂದ ವಂಚಿತವಾಗಿದೆ. ಗ್ರಾಮ ಪ್ರವೇಶಿಸುತ್ತಿದ್ದಂತೆ ರಸ್ತೆಯಲ್ಲಿ ನಿಂತ ಕಲುಷಿತ ನೀರು, ಕೆಲವು ಕಡೆ ಚರಂಡಿಯೇ ಇಲ್ಲ, ವಿದ್ಯುತ್‌ ಕಂಬಗಳಿದ್ದರೂ ಬಲ್ಬ್ಗಳೇ ಇಲ್ಲದಿರುವುದು ಗೋಚರಿಸುತ್ತದೆ.ಚಿಕ್ಕರಸಿನಕೆರೆ ಹೋಬಳಿ ಎಂದು ಘೋಷಣೆ ಯಾಗಿದ್ದರೂ ಮೂಲ ಸೌಲಭ್ಯ ಕಲ್ಪಿಸಲು ಗ್ರಾಪಂ ಮನಸ್ಸು ಮಾಡಿಲ್ಲ. ಚಿಕ್ಕರಸಿನಕೆರೆ, ಗುರುದೇವರಹಳ್ಳಿ, ಗುರು ದೇವರಹಳ್ಳಿ ಕಾಲೋನಿ, ಹುಣ್ಣನದೊಡ್ಡಿ, ಛತ್ರದ ಹೊಸಹಳ್ಳಿ ಗ್ರಾಮಗಳು ಈ ಗ್ರಾಪಂ ವ್ಯಾಪ್ತಿಗೆ ಸೇರಿಕೊಂಡಿವೆ. ಈ ಎಲ್ಲಾ ಗ್ರಾಮಗಳಲ್ಲೂ ಸೌಲಭ್ಯ ಒದಗಿ ಸಿಲ್ಲ. ಪಂಚಾಯ್ತಿ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇಲ್ಲಿನ ಸಾರ್ವಜನಿಕರ ಮಾತಿಗೆ ಅಧಿಕಾರಿಗಳು ಯಾವುದೇ ಗಮನ ನೀಡುತ್ತಿಲ್ಲ. ಸರಿಯಾದ ಸಮಯಕ್ಕೆ ಮಾತ್ರ ಕಂದಾಯ ವಸೂಲಿ ಮಾಡಲು ಬರುತ್ತಾರೆ. ಆದರೆ ಅಭಿವೃದ್ಧಿ ಬಗ್ಗೆ ಕೇಳಿದರೆ ತಮ್ಮ ಉದ್ದಟತನ ತೋರುತ್ತಾರೆ. ಕೇಂದ್ರ ಸರ್ಕಾರದ ಉದ್ಯೋಗ ಖಾತರಿ ಯೋಜನೆ ಸಂಬಂಧಿಸಿದಂತೆ ಇಲ್ಲಿಯ ಜನರಿಗೆ ಯಾವುದೇ ರೀತಿಯ ಮಾಹಿತಿ ನೀಡುತ್ತಿಲ್ಲ. ಇದರಿಂದ ಬಡ ಜನರಿಗೆ ಅನ್ಯಾಯವಾಗುತ್ತಿದೆ. 
ಪಟೇಲ್‌ ಗಿರೀಶ್‌, ಸ್ಥಳೀಯ

ಅಣ್ಣೂರು ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next