Advertisement

Mudbidri: ಕೊಳಚೆ ನೀರಿನ ಚರಂಡಿ ನಿರ್ಮಾಣ

05:05 PM Aug 22, 2024 | Team Udayavani |

ಮೂಡುಬಿದಿರೆ: ಸ್ವರಾಜ್ಯ ಮೈದಾನದಲ್ಲಿ ಏಳುವರ್ಷಗಳ ಹಿಂದೆ ಬೀಡುಬಿಟ್ಟ ಪುರಸಭಾ ದಿನವಹಿ ಮಾರುಕಟ್ಟೆ ದಿನೇ ದಿನೇ ವಿಸ್ತರಣೆಗೊಂಡ ಪರಿಣಾಮ ತ್ಯಾಜ್ಯ ಕೊಳಚೆ ನೀರಿನ ಪ್ರಮಾಣವೂ ಹೆಚ್ಚಾಗಿ ಹೊರಗೆ ಸಾಗುವುದೆಲ್ಲಿಗೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಇದರ ಬಗ್ಗೆ ಉದಯವಾಣಿಯಲ್ಲಿ ಎರಡು ಬಾರಿ ಸಚಿತ್ರ ಸುದ್ದಿಗಳೂ ಪ್ರಕಟವಾಗಿದ್ದವು.

Advertisement

ಇದಕ್ಕೆ 5 ಲಕ್ಷ ರೂ.ವೆಚ್ಚದಲ್ಲಿ ಚರಂಡಿ ನಿರ್ಮಿಸಲಾಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಈ ನಡುವೆ ಬಂದ ವಿಧಾನಸಭಾ ಚುನಾವಣೆಯ ಕಾರಣ ಪ್ರಭಾರ ಮುಖ್ಯಾಧಿಕಾರಿಗಳು ಬಂದು ಹೋಗುವ ಪ್ರಕ್ರಿಯೆಯಲ್ಲಿ ಈ ಚರಂಡಿ ನಿರ್ಮಾಣ ನೆನೆಗುದಿಗೆ ಬಿದ್ದಿತ್ತು. ಇದೀಗ ಮತ್ತೆ ಮುಖ್ಯಾಧಿಕಾರಿಯಾಗಿ ಬಂದಿರುವ ಇಂದು ಎಂ. ಅವರು ಈ ಬಗ್ಗೆ ಗಮನಹರಿಸಿದ್ದಾರೆ. ಚರಂಡಿ ನಿರ್ಮಾಣ ಕಾಮಗಾರಿ ಆರಂಭವಾಗಿದೆ.

ಈ ಚರಂಡಿ ಮುಂದುವರಿದು ಕನ್ನಡ ಭವನ, ಈಜುಕೊಳ, ಪೆಟ್ರೋಲ್‌ ಬಂಕ್‌ ಪ್ರದೇಶದಲ್ಲಿ ಮುಂದುವರಿಯಬೇಕಾಗಿದೆ. ಇದಕ್ಕಾಗಿ ಯೋಜನಾ ವೆಚ್ಚವನ್ನು ಹಿಗ್ಗಿಸಿ ಆ ಭಾಗದಲ್ಲೂ ಚರಂಡಿಯನ್ನು ಮುಂದುವರಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next