Advertisement

ಚಾರ್ಮಾಡಿ: ಕೇರಳದ ಬಸ್‌ ಪಲ್ಟಿ ; 3 ಸಾವು,20ಮಂದಿಗೆ ಗಾಯ

03:09 PM May 16, 2017 | Team Udayavani |

 ಬೆಳ್ತಂಗಡಿ : ಇಲ್ಲಿನ ಚಾರ್ಮಾಡಿ ಘಾಟ್‌ನ 3 ನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಉರುಳಿ ಬಿದ್ದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದ್ದು, ಅವಘಡದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 20 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. 

Advertisement

ಆಂಧ್ರಪ್ರದೇಶದಿಂದ ಪುಣ್ಯಕ್ಷೇತ್ರಗಳ ಪ್ರವಾಸ ಬರುತ್ತಿದ್ದ ಕೇರಳ ನೋಂದಣಿಯ ಬಸ್‌ ಚಾರ್ಮಾಡಿ ಘಾಟಿಯ 6 ಮತ್ತು 7ನೇ ತಿರುವಿನ ಮಧ್ಯೆ ಪಲ್ಟಿಯಾಯಿಯತು. ಬಸ್‌ ಪ್ರಯಾಣಿಕರಾದ ಆಂಧ್ರಪ್ರದೇಶದ ಅನಂತಪುರದ ತಾಡಿಪತ್ರಿ ರಮೇಶ್‌ ರೆಡ್ಡಿ ಕಾಲನಿಯ ಆಜಿಬಾ (47) ಹಾಗೂ ಮೆಹಬುನ್ನಿ (40) ಹಾಗೂ ಇನ್ನೊಬ್ಬರು ಮೃತಪಟ್ಟಿದ್ದಾರೆ.

ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತೂಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳಲ್ಲಿ ಓರ್ವರು ರಾತ್ರಿ ಸಾವನ್ನಪ್ಪಿದರು.
ಅವರ ಹೆಸರು ತಿಳಿದುಬಂದಿಲ್ಲ.

ಬಸ್‌ ಬಿದ್ದ ವಿಷಯ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು. 

ಬೆಳ್ತಂಗಡಿ ಠಾಣಾ ಪೊಲೀಸರು ದೌಡಾಯಿಸಿದ್ದು,10ಕ್ಕೂ ಹೆಚ್ಚು ಅಂಬುಲೆನ್ಸ್‌ಗಳು ಸ್ಥಳಕ್ಕೆ ಬಂದಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದವು. 

Advertisement

ಚಾರ್ಮಾಡಿ ಹಸನಬ್ಬ 12 ಮಂದಿಯ ತಂಡ ಕಟ್ಟಿಕೊಂಡು ಘಾಟಿಗೆ ತೆರಳಿ ಬಸ್ಸಿನ ಮಧ್ಯೆ ಸಿಲುಕಿದ್ದ ಗಾಯಾಳುಗಳ ರಕ್ಷಣೆಗೆ ನೆರವಾದರು.

ನಾಗರಿಕರು, ಧರ್ಮಸ್ಥಳ ಹಾಗೂ ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆಗೆ ಸಹಕರಿಸಿದರು. 108 ಆ್ಯಂಬುಲೆನ್ಸ್‌ ಹಾಗೂ ಖಾಸಗಿಆ್ಯಂಬುಲೆನ್ಸ್‌ ನಲ್ಲಿ ಗಾಯಾಳುಗಳ ಪೈಕಿ 11 ಮಂದಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಇತರರನ್ನು ಜಿಲ್ಲಾಡಳಿತ ವತಿಯಿಂದ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next