Advertisement

ಶೃಂಗೇರಿಯಲ್ಲಿ ಚಂಡಿಕಾ ಯಾಗ ಆರಂಭ

03:19 PM Oct 15, 2018 | |

ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ನಡೆಯುತ್ತಿರುವ ದಸರಾ ಉತ್ಸವ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಉತ್ಸವದ ಐದನೇ ದಿನವಾದ ಭಾನುವಾರ ಆರಾಧ್ಯ ದೇವತೆ ಶ್ರೀ ಶಾರದೆಗೆ ಗರುಡವಾಹನ ಅಲಂಕಾರ (ವೈಷ್ಣವೀ) ಮಾಡಲಾಗಿತ್ತು. ತಾಯಿ ಶಾರದೆ ಕೈಯಲ್ಲಿ ಶಂಖ, ಚಕ್ರ, ಗಧೆ ಮೊದಲಾದ ಆಯುಧಗಳನ್ನು ಧರಿಸಿ, ಗರುಡವನ್ನೇರಿ ವೈಷ್ಣವಿಯಾಗಿ ಶ್ರೀಮಹಾವಿಷ್ಣುವಿನ ಶಕ್ತಿಯಾಗಿ ಭಕ್ತರನ್ನು ಅನುಗ್ರಹಿಸಿದಳು.

Advertisement

ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ಬೆಳಗಿನ ನಿತ್ಯ ವಿಧಿ ಗಳನ್ನು ಪೂರೈಸಿದ ನಂತರ ಶಾರದಾಂಬಾ ದೇಗುಲಕ್ಕೆ ತೆರಳಿ ಜಗನ್ಮಾತೆಗೆ ಪೂಜೆ ಸಲ್ಲಿಸಿದರು. ನಂತರ ಆಗಮಿಸಿದ ಕಿರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಎಲ್ಲಾ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಂಗಳಾರತಿ ಸ್ವೀಕರಿಸಿದರು. ನಂತರ ಶಾರದಾ ಸನ್ನಿಧಿಗೆ ತೆರಳಿ ಶ್ರೀ ಸೂಕ್ತ ಜಪ, ಭುವನೇಶ್ವರಿ ಜಪ, ಜಗನ್ಮಾತೆಯ ಆವಾಸ ಸ್ಥಾನವೆಂದು ಶಾಸ್ತ್ರದಲ್ಲಿ ತಿಳಿಸಿರುವ ಶ್ರೀ ಚಕ್ರಕ್ಕೆ ನವಾವರಣ ಪೂಜೆ ನೆರವೇರಿಸಿದರು.

ನವರಾತ್ರಿ ಅಂಗವಾಗಿ ಶತಚಂಡಿಕಾಯಾಗದ ಅಂಗವಾಗಿ ಶ್ರೀಮಠದಲ್ಲಿ ಯಾಗಶಾಲೆಯಲ್ಲಿ ಶಾಲಾಪ್ರವೇಶ, ಪುರಶ್ಚರಣ ಆರಂಭಗೊಂಡಿತು. ಶ್ರೀಮಠದ ಅರ್ಚಕ ಶಿವಕುಮಾರಶರ್ಮ ನೇತೃತ್ವದಲ್ಲಿ ಅರ್ಚಕರ ತಂಡ ಯಾಗ ನಡೆಸುತ್ತಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನವದೆಹಲಿಯ ಸ್ವರ್ಣಲತಾ ಸುಬ್ರಮಣಿಯನ್‌ ಮತ್ತು ತಂಡದರಿಂದ ಹಾಡುಗಾರಿಕೆ ನಡೆಯಿತು.ಬೇಗಾರು ಗ್ರಾ.ಪಂ.ಭಕ್ತಾದಿಗಳು ಮತ್ತು ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿ ಗಳು ರಾಜ ಬೀದಿ ಉತ್ಸವದಲ್ಲಿ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. 

ರಾತ್ರಿ ಶ್ರೀಮಠದ ಒಳ ಪ್ರಾಂಗಣದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ದರ್ಬಾರ್‌ ನಡೆಸಿದರು. ಸ್ವರ್ಣ ರಥದಲ್ಲಿ ಶಾರದೆಯನ್ನು ಪ್ರತಿಷ್ಠಾಪಿಸಿ, ಮೂರು ಪ್ರದಕ್ಷಿಣೆ ನಂತರ ವೇದ ಪಾರಾಯಣಗಳು, ಪಂಚಾಂಗ ಶ್ರವಣ,ವಾದ್ಯ ಸೇವೆ ಮತ್ತು ಮಹಾಮಂಗಳಾರತಿ ನಡೆಯಿತು.
 
ಸೋಮವಾರದ ಕಾರ್ಯಕ್ರಮ: ಶ್ರೀ ಶಾರದಾಂಬೆಗೆ ವೀಣಾಶಾರದಾಲಂಕಾರ ನೆರವೇರಲಿದೆ. ಉಭಯ ಜಗದ್ಗುರುಗಳಿಂದ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ, ಸಂಜೆ ಬೀದಿ ಉತ್ಸವ ವಿದ್ಯಾರಣ್ಯಪುರ ಗ್ರಾಪಂ ಭಕ್ತಾದಿಗಳು ಮತ್ತು ವಿವಿಧ ಸಂಘ, ಸಂಸ್ಥೆಯಿಂದ ನಡೆಯಲಿದೆ. ರಾತ್ರಿ ಜಗದ್ಗುರುಗಳ ದರ್ಬಾರ್‌, ದಿಂಡಿ ದೀಪಾರಾಧನೆ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ನಡೆಯಲಿದೆ.

Advertisement

ಸಾಂಸ್ಕೃತಿಕ ಕಾರ್ಯಕ್ರಮ: ಬೆಂಗಳೂರಿನ ವೈ.ಜಿ.ಶ್ರೀಲತಾ ಮತ್ತು ತಂಡದರಿಂದ ವೀಣಾವಾದನ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next