Advertisement

Bengal; ಕೊನೆಗೂ ಸಂದೇಶಖಾಲಿ ಆರೋಪಿ ಶಹಜಹಾನ್‌ ಶೇಖ್‌ ಸಿಬಿಐ ಕಸ್ಟಡಿಗೆ

08:47 PM Mar 06, 2024 | Team Udayavani |

ಕೋಲ್ಕತಾ : ಕಲ್ಕತ್ತಾ ಹೈಕೋರ್ಟ್‌ ಬುಧವಾರ ಬೆಳಗ್ಗೆ ನಿರ್ದೇಶನದ ನೀಡಿದ ನಂತರ, ಸಂದೇಶಖಾಲಿ ಪ್ರಕರಣದ ಆರೋಪಿ ಶಹಜಹಾನ್‌ ಶೇಖ್‌ನನ್ನು ಸಿಐಡಿಯಿಂದ ಸಿಬಿಐ ಬುಧವಾರ ಕಸ್ಟಡಿಗೆ ಪಡೆದುಕೊಂಡಿದೆ.

Advertisement

ಸಿಬಿಐ ಅಧಿಕಾರಿಗಳ ತಂಡವು ಸಿಐಡಿ ಪ್ರಧಾನ ಕಚೇರಿ ಭವಾನಿ ಭವನಕ್ಕೆ ಸಂಜೆ 4 ಗಂಟೆಗೆ ಮೊದಲು ತಲುಪಿತ್ತು. ಕಲ್ಕತ್ತಾ ಹೈಕೋರ್ಟ್ ಸಂಜೆ 4.15 ರ ಗಡುವನ್ನು ನಿಗದಿಪಡಿಸಿದ್ದರೂ, ರಾಜ್ಯ ತನಿಖಾ ಸಂಸ್ಥೆಯಿಂದ ಹಸ್ತಾಂತರ ಸಂಜೆ 6:48 ರ ಸುಮಾರಿಗೆ ನಡೆಯಿತು.

ಎರಡು ಗಂಟೆಗೂ ಹೆಚ್ಚು ಕಾಲ ಕಾದರೂ ಪಶ್ಚಿಮ ಬಂಗಾಳ ಸಿಐಡಿಯಿಂದ ಶೇಖ್ ನನ್ನು ಕಸ್ಟಡಿಗೆ ಪಡೆಯಲು ಸಿಬಿಐ ಮಂಗಳವಾರ ವಿಫಲವಾಗಿತ್ತು. ಕಲ್ಕತ್ತಾ ಹೈಕೋರ್ಟ್‌ನ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರಿಂದ ಸಂದೇಶಖಾಲಿ ಪ್ರಕರಣದ ಆರೋಪಿ ಟಿಎಂಸಿ ಯಿಂದ ಅಮಾನತಾಗಿರುವ ನಾಯಕನನ್ನು ಕೇಂದ್ರ ಸಂಸ್ಥೆಗೆ ಹಸ್ತಾಂತರಿಸಲಾಗಿಲ್ಲ ಎಂದು ಸಿಐಡಿ ಹೇಳಿತ್ತು.

ಸುಲಿಗೆ, ಭೂ ಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಹಜಹಾನ್‌ ನನ್ನ ಬಂಧನಕ್ಕೊಳಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next