Advertisement

ನಾಳೆ ನಿಗದಿಯಾಗಿದ್ದ ರಾಜ್ಯ ಸಚಿವ ಸಂಪುಟ ಸಭೆ ದಿಢೀರ್ ಮುಂದೂಡಿಕೆ

02:38 PM May 04, 2022 | Team Udayavani |

ಬೆಂಗಳೂರು : ಮೇ 5 ರಂದು ನಿಗದಿಯಾಗಿದ್ದ ರಾಜ್ಯ ಸಚಿವ ಸಂಪುಟ ಸಭೆಯನ್ನು ಹಠಾತ್ ಮುಂದೂಡಲಾಗಿದೆ. ಇದು ಕುತೂಹಲಕ್ಕೆ ಕಾರಣವಾಗಿದೆ.

Advertisement

ಪೂರ್ವ ನಿಗದಿಯಾಗಿದ್ದ ಸಂಪುಟ ಸಭೆ ಮೇ 11 ರಂದು ನಡೆಯಲಿದ್ದು, ಮೇ 5 ರಿಂದ 10 ರ ಅವಧಿಯಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರ್ರಚನೆ ಸಾಧ್ಯತೆ ದಟ್ಟವಾಗಿದೆ. ಹೊಸ ಸಂಪುಟ ಸದಸ್ಯರೊಂದಿಗೆ ಮೇ 11ರಂದು ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಆರ್‌ ಎಸ್‌ಎಸ್‌ ಶ್ರೀಮಂತ ಎನ್‌ಜಿಓ: ಬಿಕೆ ಹರಿಪ್ರಸಾದ್‌

ಪ್ರಧಾನಿ ನರೇಂದ್ರ‌ ಮೋದಿ ವಿದೇಶದಿಂದ ವಾಪಾಸ್ ಆದ ಬಳಿಕ ರಾಜ್ಯ ರಾಜಕಾರಣಕ್ಕೆ ಸಂಬಂಧಪಟ್ಟ ಅಸ್ಪಷ್ಟತೆ ಕೊನೆಯಾಗಲಿದೆ.‌ ಈ ಹಿನ್ನೆಲೆಯಲ್ಲಿ ಸಂಪುಟ ಸಭೆ ಮುಂದೂಡಿಕೆಯಾಗಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next