Advertisement

ಸಿಎಎ ಒಪ್ಪದವರು ದೇಶದ್ರೋಹಿಗಳು: ರೆಡ್ಡಿ

11:11 PM Jan 15, 2020 | Lakshmi GovindaRaj |

ಬಳ್ಳಾರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಒಪ್ಪದವರು, ವಿರೋ ಧಿಸುವವರು ದೇಶದ್ರೋಹಿಗಳು ಎಂದು ಶಾಸಕ ಸೋಮಶೇಖರರೆಡ್ಡಿ ಹೇಳಿದರು. ನಗರದ ಸತ್ಯನಾರಾಯಣ ಪೇಟೆಯಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಎ ಬೆಂಬಲಿಸಿ ಹಾಕಲಾದ ರಂಗೋಲಿ ವೀಕ್ಷಿಸಿ ಮಾತನಾಡಿ, ಭಾರತವನ್ನು ಪ್ರೀತಿಸುವವರಿಗೆ ನಾನು ಪ್ರಾಣ ಕೊಡುವೆ.

Advertisement

ಆದರೆ, ದ್ವೇಷಿಸುವವರನ್ನು ಹತ್ತಿರವೂ ಸೇರಿಸಿಕೊಳ್ಳಲ್ಲ. ಸಿಎಎ ಜಾಗೃತಿ ಸಮಾವೇಶದಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿ ಸಿದಂತೆ ನನ್ನ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ನಡೆಯುತ್ತಿದೆ. ನ್ಯಾಯಾಂಗಕ್ಕೆ ಎಲ್ಲರೂ ತಲೆ ಬಾಗಲೇಬೇಕು. ತನಿಖೆಗೆ ಸಹಕರಿಸುವೆ ಎಂದರು. ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್‌ಸಿಂಗ್‌ ಅವರ ಲೆಟರ್‌ಹೆಡ್‌ ಬಳಸಿಕೊಂಡು ಯಾರೋ ಕಿಡಿಗೇಡಿಗಳು ಭಟ್ಕಳದ ಮದರಸಾ ಒಂದಕ್ಕೆ ಬೆದರಿಕೆ ಪತ್ರ ಕಳುಹಿಸಿದ್ದಾರೆ.

ಈ ಕುರಿತು ನನಗೂ ಮಾಹಿತಿ ಬಂದಿದೆ. ಯಾರೋ ಕಿಡಿಗೇಡಿಗಳು, ದೇಶದ್ರೋಹಿಗಳು ಈ ಕೆಲಸ ಮಾಡಿದ್ದಾರೆ. ಇಂಥವರ ವಿರುದ್ಧ ಯಾವುದೇ ದೂರು ನೀಡುವುದಿಲ್ಲ. ಪೊಲೀಸರೇ ತನಿಖೆ ನಡೆಸುತ್ತಾರೆ. ಶಾಸಕ ಆನಂದಸಿಂಗ್‌ ಅವರ ಲೇಟರ್‌ ಹೆಡ್‌ನ‌ಲ್ಲಿ ಅವರ ಸೀಲ್‌, ಸಹಿ ಇದೆ. ವಿಳಾಸ ಮಾತ್ರ ನನ್ನದಿದೆ. ಈ ಕುರಿತು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next