Advertisement

Rain ಬೈಂದೂರು, ಕುಂದಾಪುರ: ಮರ ಬಿದ್ದು ಮನೆ ಹಾನಿ

11:37 PM Jun 09, 2024 | Team Udayavani |

ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕಿನಾದ್ಯಂತ ರವಿವಾರವೂ ಉತ್ತಮ ಮಳೆಯಾಗಿದೆ. ಬೆಳಗ್ಗೆ ಅಬ್ಬರದ ಮಳೆಯಾಗಿತ್ತು. ಬಳಿಕ ಮಧ್ಯಾಹ್ನದವರೆಗೆ ತುಸು ಬಿಡುವು ನೀಡಿದರೂ ಮಧ್ಯಾಹ್ನದ ಬಳಿಕ ಮತ್ತೆ ಬಿರುಸು ಪಡೆದುಕೊಂಡಿತು.

Advertisement

ಕುಂದಾಪುರ ತಾಲೂಕಿನ ಕನ್ಯಾನ ಗ್ರಾಮದ ಶಿವರಾಮ ಅವರ ಮನೆಗೆ ಮೇಲೆ ಮರ ಬಿದ್ದು 10 ಸಾವಿರ ರೂ. ನಷ್ಟ, ತೆಕ್ಕಟ್ಟೆ ಗ್ರಾಮದ ಲಕ್ಷ್ಮೀ ಅವರ ಮನೆಗೆ ತೆಂಗಿನ ಮರ ಬಿದ್ದು 10 ಸಾವಿರ ರೂ. ನಷ್ಟ, ಗಂಗೊಳ್ಳಿ ಗ್ರಾಮದ ಸಾಂತಯ್ಯನ ಕೇರಿಯ ಸಕ್ಲಾತಿ ಕೇಶವ ಶೇರುಗಾರ ಅವರ ಮನೆಗೆ ಮರ ಬಿದ್ದು 50 ಸಾವಿರ ರೂ. ನಷ್ಟ ಸಂಭವಿಸಿದೆ.

ಕಡಲಬ್ಬರ ಜೋರು
3-4 ದಿನಗಳಿಂದ ಭಾರೀ ಮಳೆಯಾಗು ತ್ತಿದ್ದು ನದಿಗಳ ನೀರಿನ ಮಟ್ಟವೂ ಹೆಚ್ಚುತ್ತಿದೆ. ವಾರಾಹಿ, ಚಕ್ರ, ಕುಬಾj, ಸೌಪರ್ಣಿಕಾ, ಪಂಚಗಂಗಾವಳಿ, ಸುಮನಾವತಿ ಸಹಿತ ಕುಂದಾಪುರ, ಬೈಂದೂರು ಭಾಗದ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಕೋಡಿ, ಗಂಗೊಳ್ಳಿ, ಮರವಂತೆ, ನಾವುಂದ, ಅಳ್ವೆಗದ್ದೆ ಸಹಿತ ಕರಾವಳಿ ತೀರದುದ್ದಕ್ಕೂ ಕಡಲ ಅಲೆಗಳ ಅಬ್ಬರ ಜೋರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next