Advertisement

Byndoor : ವಿದ್ಯುತ್‌ ಶಾಕ್‌; ಲೈನ್‌ಮನ್‌ ಸಾವು

11:45 PM Jun 03, 2024 | Team Udayavani |

ಬೈಂದೂರು: ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ರಿಪೇರಿ ಮಾಡುವ ವೇಳೆ ವಿದ್ಯುತ್‌ ಶಾಕ್‌ ತಗಲಿ ಲೈನ್‌ಮನ್‌ ಮೃತಪಟ್ಟ ಘಟನೆ ಬೈಂದೂರಿನಲ್ಲಿ ಸೋಮವಾರ ನಡೆದಿದೆ.

Advertisement

ಸಲೀಂ (38) ಮೃತಪಟ್ಟ ಲೈನ್‌ಮನ್‌. ಸೋಮವಾರ ಮಧ್ಯಾಹ್ನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಟ್ರಾನ್ಸ್‌ಫಾರ್ಮರ್‌ ಬಳಿ ವಿದ್ಯುತ್‌ ಸಂಪರ್ಕ ರಿಪೇರಿ ಮಾಡುವ ವೇಳೆ ಈ ದುರ್ಘ‌ಟನೆ ನಡೆದಿದೆ.

ಎರಡು ತಿಂಗಳ ಮಗುವಿನ ತಂದೆಯಾಗಿದ್ದರು
ಅವರು ಮೂಲತಃ ಉತ್ತರ ಕನ್ನಡದ ಮುಂಡಗೋಡು ನಿವಾಸಿಯಾಗಿದ್ದು, ಬೈಂದೂರು ಮೆಸ್ಕಾಂನಲ್ಲಿ ಎಂಟು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ವಿವಾಹಿತರಾಗಿರುವ ಅವರಿಗೆ ಎರಡು ತಿಂಗಳ ಮಗು ಇದೆ. ವಿದ್ಯುತ್‌ ಶಾಕ್‌ ತಗಲಿ ಕಳೆದ ವರ್ಷ ಶಿರೂರಿನ ಉದ್ಯಮಿಯೊಬ್ಬರು ಮೃತಪಟ್ಟರೆ ಮೇ ತಿಂಗಳಿನಲ್ಲಿ ಶಿರೂರಿನ ಮೀನುಗಾರ ವ್ಯಕ್ತಿ ವಿದ್ಯುತ್‌ ತಂತಿ ತುಳಿದು ಸಾವನ್ನಪ್ಪಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು

ಶಾಕ್‌: ಮೆಕಾನಿಕ್‌ ಸಾವು
ಉಡುಪಿ: ವಿದ್ಯುತ್‌ ಶಾಕ್‌ ಹೊಡೆದು ಎಸಿ (ಹವಾ ನಿಯಂತ್ರಣ) ಮೆಕಾನಿಕ್‌ವೊಬ್ಬರು ಸಾವನ್ನಪ್ಪಿದ ಘಟನೆ ಉಡುಪಿ ನಗರದ ಖಾಸಗಿ ಹೊಟೇಲ್‌ನಲ್ಲಿ ಸೋಮವಾರ ನಡೆದಿದೆ.

ಕಿನ್ನಿಮೂಲ್ಕಿಯ ಬೈಲೂರು ನಿವಾಸಿ ಗಿರೀಶ್‌ ಶೇರಿಗಾರ್‌ (45) ಮೃತರು. ಅವರು ಸೋಮವಾರ ಮಧ್ಯಾಹ್ನದ ವೇಳೆ ನಗರದ ಖಾಸಗಿ ಹೊಟೇಲ್‌ವೊಂದಕ್ಕೆ ರೆಫ್ರಿಜರೇಟರ್‌ ಪರಿಶೀಲನೆ ಮಾಡಲು ಹೋಗಿದ್ದರು.

Advertisement

ಈ ವೇಳೆ ಅವರಿಗೆ ವಿದ್ಯುತ್‌ ಶಾಕ್‌ ಹೊಡೆದಿದೆ. ಕೂಡಲೇ ಹೊಟೇಲ್‌ನವರು ಗಿರೀಶ್‌ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಗಿರೀಶ್‌ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next