Advertisement

ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ: ಮಲ್ಯ ಮನವಿ ವಜಾ

03:45 PM Nov 22, 2018 | udayavani editorial |

ಹೊಸದಿಲ್ಲಿ : ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳ ಕಾಯಿದೆಯಡಿ ಕಾನೂನು ಕ್ರಮ ಜರುಗಿಸುವ ಜಾರಿ ನಿರ್ದೇಶನಾಲಯದ ಕೋರಿಕೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್‌ ಮಲ್ಯ ಸಲ್ಲಿಸಿದ ಮನವಿಯನ್ನು ಬಾಂಬೆ ಹೈಕೋರ್ಟ್‌ ಇಂದು ಗುರುವಾರ ವಜಾ ಮಾಡಿದೆ. 

Advertisement

‘ವಿಜಯ್‌ ಮಲ್ಯ ಅವರನ್ನು ತಲೆ ಮರೆಸಿಕೊಂಡಿರುವ ಅರ್ಥಿಕ ಅಪರಾಧಿ ಎಂದು  ಕಾಯಿದೆಯಡಿ ಘೋಷಿಸಬೇಕು’ ಎಂದು ಜಾರಿ ನಿರ್ದೇಶನಾಲಯ ಬಯಸಿದೆ.

ಈಗ ಮುಚ್ಚಿ ಹೋಗಿರುವ ಮಲ್ಯ ಅವರ ಕಿಂಗ್‌ ಫಿಶರ್‌ ಏರ್‌ ಲೈನ್ಸ್‌ ಮತ್ತು ಇತರ ಸಂಸ್ಥೆಗಳಿಗೆ ಬ್ಯಾಂಕುಗಳು ನೀಡಿರುವ ಸಾಲ ಮತ್ತು ಬಡ್ಡಿ ಸೇರಿ 9,990.07 ಕೋಟಿ ರೂ. ಮೊತ್ತ ಬಾಕಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವಿಜಯ್‌ ಮಲ್ಯ ಅವರು ಪ್ರಕೃತ ಲಂಡನ್‌ನಲ್ಲಿ ಭಾರತ ಸರಕಾರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಪರವಾಗಿ ದಾಖಲಿಸಿರುವ ಗಡೀಪಾರು ಪ್ರಕರಣದ ವಿರುದ್ಧ ಕಾನೂನು ಹೋರಾಟ ಮಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next