Advertisement

ಜಿಎಸ್‌ಬಿ ಸೇವಾ ಮಂಡಲ ಸಯಾನ್‌: ರಕ್ತದಾನ ಶಿಬಿರ

01:11 PM May 07, 2021 | Team Udayavani |

ಮುಂಬಯಿ: ಜಿಎಸ್‌ಬಿ ಸೇವಾ ಮಂಡಲ ಸಯಾನ್‌ ವತಿಯಿಂದ ರಕ್ತದಾನ ಶಿಬಿರವು ಮೇ 2ರಂದು ಸೇವಾ ಮಂಡಲದ ಶ್ರೀ ಗುರುಗಣೇಶ ಪ್ರಸಾದ್‌ ಸಭಾಗೃಹದಲ್ಲಿ ನಡೆಯಿತು.

Advertisement

ಬೆಳಗ್ಗೆ 10ರಿಂದ ಅಪರಾಹ್ನ 4ರ ವರೆಗೆ ಜರಗಿದ ರಕ್ತದಾನ ಶಿಬಿರದಲ್ಲಿ ಸಯಾನ್‌ನ ಲೋಕಮಾನ್ಯ ತಿಲಕ್‌ ಆಸ್ಪತ್ರೆಯ ಬ್ಲಿಡ್‌ ಬ್ಯಾಂಕ್‌ನ ವೈದ್ಯರು ಮತ್ತು ಸಿಬಂದಿ ಪಾಲ್ಗೊಂಡು ಸಹಕರಿಸಿದರು. ಪ್ರಸ್ತುತ ಕೊರೊನಾ ಮಹಾಮಾರಿಯಿಂದ ಸರ್ವರು ಲಸಿಕೆ ಪಡೆಯುವ ಅನಿವಾರ್ಯತೆ ಇದ್ದು, ಲಸಿಕೆ ಪಡೆದ 28 ದಿನಗಳ ಕಾಲ ರಕ್ತದಾನ ಸಾಧ್ಯವಿಲ್ಲದ ಕಾರಣ ಮುಂದೆ ರಕ್ತದ ಕೊರತೆ ಎದುರಾಗಬಹುದು ಎಂಬುದನ್ನು ಮನಗಂಡು ಸೇವಾ ಮಂಡಲವು ಈ ಶಿಬಿರವನ್ನು ಆಯೋಜಿಸಿತ್ತು.

ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನಗೈದು ಸಹಕರಿ ಸಿದರು. ರಕ್ತದಾನ ಶಿಬಿರದಲ್ಲಿ ಸೇವಾ ಮಂಡಲದ ಜತೆ ಕಾರ್ಯದರ್ಶಿ ಪ್ರಶಾಂತ್‌ ಪುರಾಣಿಕ್‌, ಟ್ರಸ್ಟಿಗಳಾದ ಅಮಿತ್‌ ಪೈ, ಸುರೇಶ್‌ ಭಟ್‌ ಅವರು ಉಪಸ್ಥಿತರಿದ್ದರು.

ಸಯಾನ್‌ ಲೋಕಮಾನ್ಯ ತಿಲಕ್‌ ಆಸ್ಪತ್ರೆಯ ಬ್ಲಿಡ್‌ ಬ್ಯಾಂಕ್‌ನ ಡಾ| ಸುನೀತಾ ಗಮಾಂಡೆ ಅವರಿಗೆ ಶ್ರೀ ಮಹಾಗಣಪತಿಯ ಫೋಟೋ ನೀಡಿ ಗೌರವಿಸಲಾಯಿತು.
ಸೇವಾ ಮಂಡಲದ ಆಡಳಿತ ಸಮಿತಿ, ಕಾರ್ಯಕಾರಿ ಸಮಿತಿಯ ಸರ್ವಸದಸ್ಯರು ರಕ್ತದಾನ ಶಿಬಿರದ ಯಶಸ್ಸಿಗೆ ಸಹಕರಿಸಿದರು.

ಜಾತಿ, ಧರ್ಮವನ್ನು ಮರೆತು ಹಲವಾರು ಮಂದಿ ಪಾಲ್ಗೊಂಡು ರಕ್ತದಾನಗೈದರು. ಜಿಎಸ್‌ಬಿ ಸೇವಾ ಮಂಡಲದ ಯುವ ವಿಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನಗೈದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next