Advertisement

ಕ್ಷೇತ್ರಗಳಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿರುವವರಿಗೆ ಬಿಜೆಪಿ “ಗಾಳ’

11:52 PM Jul 08, 2019 | Lakshmi GovindaRaj |

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಬದಲಿ ಸರ್ಕಾರ ರಚನೆಗೆ ಒಳಗಿಂದೊಳಗೇ ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವ ವಿಚಾರದಲ್ಲಿ ಜಾಣ್ಮೆ ವಹಿಸಿದೆ.

Advertisement

ಸ್ವಂತ ಶಕ್ತಿ, ಸಾಮರ್ಥ್ಯದಿಂದ ಗೆಲ್ಲುವ ಶಾಸಕರನ್ನೇ ಗುರುತಿಸಿ ರಾಜೀನಾಮೆ ಕೊಡಿಸುತ್ತಿದೆ. ರಾಮಲಿಂಗಾರೆಡ್ಡಿ, ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌, ಮುನಿರತ್ನ, ಬಿ.ಸಿ.ಪಾಟೀಲ್‌, ರಮೇಶ್‌ ಜಾರಕಿಹೊಳಿ ಹೀಗೆ ಬಹುತೇಕ ತಮ್ಮ ಕ್ಷೇತ್ರಗಳಲ್ಲಿ ಒಳ್ಳೆಯ ಹೆಸರು ಇಟ್ಟುಕೊಂಡು ಜನಪ್ರಿಯತೆ ಹೊಂದಿರುವವರಿಗೆ ಗಾಳ ಹಾಕಿದೆ.

ಜೆಡಿಎಸ್‌ನಿಂದ ಮಹಾಲಕ್ಷ್ಮಿ ಲೇ ಔಟ್‌ ಶಾಸಕ ಗೋಪಾಲಯ್ಯ ಅವರಿಗೂ ಇದೇ ಮಾನದಂಡದಡಿ ರಾಜೀನಾಮೆ ಕೊಡಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದೊಮ್ಮೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಉಪ ಚುನಾವಣೆ ಎದುರಾದರೂ ಬಿಜೆಪಿಯ ಹೆಸರು, ಜತೆಗೆ ಕ್ಷೇತ್ರಗಳಲ್ಲಿ ಸ್ವಂತ ವರ್ಚಸ್ಸಿನಿಂದ ಗೆಲುವು ಸಾಧ್ಯವಾಗಬೇಕು ಎಂಬ ಉದ್ದೇಶ ಇದರ ಹಿಂದಿದೆ ಎನ್ನಲಾಗಿದೆ.

15 ಶಾಸಕರು ರಾಜೀನಾಮೆ ಕೊಟ್ಟು ಉಪ ಚುನಾವಣೆ ನಡೆದರೆ ಕನಿಷ್ಠ 10 ಶಾಸಕರಾದರೂ ಗೆಲ್ಲುವಂತಿರಬೇಕು ಎಂಬ ಕಾರಣಕ್ಕೆ ರಾಜೀನಾಮೆ ಕೊಡಿಸಲು ಆಯ್ಕೆ ಮಾಡುವಾಗಲೂ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next