Advertisement

ಸಾಮ್ನಾ ನಿಷೇಧದ ಬಿಜೆಪಿ ಯತ್ನ ತುರ್ತು ಪರಿಸ್ಥಿತಿಗೆ ಸಮ: ಉದ್ಧವ್‌

12:31 PM Feb 16, 2017 | udayavani editorial |

ಪುಣೆ : ಸ್ಥಳೀಯಾಡಳಿತೆ ಚುನಾವಣೆಯ ಪ್ರಯುಕ್ತ ಇದೇ ಫೆ.16, 20 ಮತ್ತು 21ರಂದು ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯ ಪ್ರಕಟನೆಯನ್ನು ನಿಷೇಧಿಸಬೇಕು ಎಂದು ರಾಜ್ಯ ಬಿಜೆಪಿಯ ಪದಾಧಿಕಾರಿ ಓರ್ವರು ರಾಜ್ಯದ ಚುನಾವಣಾ ಆಯೋಗವನ್ನು ಆಗ್ರಹಿಸಿರುವ ಹಿನ್ನೆಲೆಯಲ್ಲಿ, ಶಿವಸೇನೆಯ ರಾಷ್ಟ್ರಾಧ್ಯಕ್ಷರಾಗಿರುವ ಉದ್ಧವ್‌ ಠಾಕ್ರೆ ಅವರು ಈ ಯತ್ನವನ್ನು ತುರ್ತು ಪರಿಸ್ಥಿತಿಗೆ ಹೋಲಿಸಿದ್ದಾರೆ.

Advertisement

ಮತದಾನಕ್ಕೆ ಎರಡು ದಿನ ಮುನ್ನ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪ್ರಚಾರಾಭಿಯಾನದ ವಿವರಗಳನ್ನು ಪ್ರಕಟಿಸುವುದಕ್ಕೆ ನಿಷೇಧ ಇರುವುದರಿಂದ, ಈ ರೀತಿಯ ಪ್ರಕಟನೆಯನ್ನು ಕೈಗೊಳ್ಳುತ್ತಿರುವ ಸಾಮ್ನಾ ಮೇಲೆ ಫೆ.16, 20 ಹಾಗೂ 21ರಂದು ಪ್ರಕಟನೆ ನಿಷೇಧ ಹೇರಬೇಕು ಎಂದು ರಾಜ್ಯ ಬಿಜೆಪಿ ವಕ್ತಾರೆ ಶ್ವೇತಾ ಶಾಲಿನಿ ಅವರು ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದರು.

ಮಹಾರಾಷ್ಟ್ರದ 10 ಮುನಿಸಿಪಲ್‌ ಕಾರ್ಪೊರೇಶನ್‌ ಮತ್ತು 25 ಜಿಲ್ಲಾ ಪರಿಷತ್‌ಗಳಿಗೆ ಇದೇ ಫೆ.16 ಮತ್ತು 21ರಂದು ಎರಡು ಹಂತಗಳ ಚುನಾವಣೆ ನಡೆಯಲಿದೆ. 

“ಸಾಮ್ನಾವನ್ನು ಮುಚ್ಚುವುದು ಎಂದಿಗೂ ಸಾಧ್ಯವಿಲ್ಲ’ ಎಂದು ಪುಣೆಯಲ್ಲಿ ನಿನ್ನೆ ಬುಧವಾರ ಸಂಜೆ ನಡೆದಿದ್ದ ಚುನಾವಣಾ ರಾಲಿಯಲ್ಲಿ ಗುಡುಗಿದ ಉದ್ಧವ್‌ ಠಾಕ್ರೆ, “ಇಂತಹ ಪರಿಸ್ಥಿತಿಯನ್ನು ದೇಶ ಈ ಹಿಂದೆ ಕಂಡಿದ್ದ ತುರ್ತು ಪರಿಸ್ಥಿತಿಗೆ ಹೋಲಿಸಬಹುದಾಗಿದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next