Advertisement

ಬಿಜೆಪಿ ಆಪರೇಷನ್‌ ಮಾಡುತ್ತಿಲ್ಲ: ರಾಜುಗೌಡ

06:25 AM Sep 23, 2018 | |

ಯಾದಗಿರಿ: ಬಿಜೆಪಿ ಯಾವುದೇ ಆಪರೇಷನ್‌ ಮಾಡ್ತಿಲ್ಲ, ಆಸ್ಪತ್ರೆ ಮುಚ್ಚಿದ್ದೀವಿ, ತಮ್ಮ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಡಿಟ್ಟುಕೊಳ್ಳಲಾಗದೇ ಸಮ್ಮಿಶ್ರ ಸರ್ಕಾರ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಶಾಸಕ
ರಾಜುಗೌಡ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಗೆದ್ದು ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯಾಗಿಸೋದು ನಮ್ಮ ಗುರಿ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ನಿಲ್ಲುತ್ತಿಲ್ಲ. ಮಂಡ್ಯದಲ್ಲಿ ಒಂದೇ ದಿನ ನಾಲ್ವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿಎಂ ರಾಜಕೀಯ ಬಿಟ್ಟು ರೈತರ ಬಗ್ಗೆ ಕಾಳಜಿ ತೋರಲಿ. ರೈತರಿಗೆ ಮೊದಲು ಋಣ ಮುಕ್ತವಲ್ಲ, ಮರಣಮುಕ್ತ ಪ್ರಮಾಣ ಪತ್ರ ನೀಡಲಿ. ರಾಜ್ಯದಲ್ಲಿ ಸರ್ಕಾರ ಅಭಿವೃದಿಟಛಿ ಕೆಲಸ ಮಾಡುತ್ತಿಲ್ಲ, ಅಧಿ ಕಾರಿಗಳು ಆಸಕ್ತಿಯಿಂದ ಕೆಲಸ ನಿರ್ವಹಿಸುತ್ತಿಲ್ಲ. ಹೀಗಾದರೆ, ಸರ್ಕಾರವೇ ದೇವರು ಎಂದು ನಂಬಿರುವ ರೈತರ ಸ್ಥಿತಿ ಏನು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next