Advertisement

ಬಿಜೆಪಿಯವರು ರಾಜಕೀಯ ಮೀಸಲಾತಿ ವಿರೋಧಿಗಳು: ಸಿದ್ದರಾಮಯ್ಯ

03:59 PM Aug 20, 2022 | Team Udayavani |

ಬೆಂಗಳೂರು: ದೇವರಾಜ ಅರಸು ಅವರು ದೀನ ದಲಿತರಿಗೆ, ಬಡವರಿಗೆ ಹಿಂದುಳಿದ ವರ್ಗಗಳಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ” ಉಳುವವನೇ ಹೊಲದ ಒಡೆಯ” ಕಾನೂನು ಜಾರಿಗೆ ತಂದರು.ಆದರೆ ಈಗಿನ ಬಿಜೆಪಿ ಈಗ ‘ಉಳ್ಳವನೆ ಹೊಲದೊಡೆಯ” ಮಾಡಿದೆ ಇದನ್ನು ಜನರಿಗೆ ತಿಳಿ ಹೇಳುವ ಕೆಲಸ ಆಗಬೇಕಾಗಿದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.

Advertisement

ಕೆಪಿಸಿಸಿ ಹಿಂದುಳಿದ ವಿಭಾಗ ಹಮ್ಮಿಕೊಂಡಿದ್ದ ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಕಾರ್ಯಕ್ರಮದಲ್ಲಿ ಮಾತನಾಡಿ ರಾಜೀವ್ ಗಾಂಧಿ ಅವರು ಹಿಂದುಳಿದ ವರ್ಗಳಿಗೆ ರಾಜಕೀಯ ಮೀಸಲಾತಿ ನೀಡಲು ಮುಂದಾಗಿದ್ದರು. ಆದರೆ ಆಗಿನ ಬಿಜೆಪಿ ಉಪಾಧ್ಯಕ್ಷ ರಾಮಾ ಜೋಯಿಸ್ ಅವರು ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಹೋದರು.ಬಿಜೆಪಿಯವರು ರಾಜಕೀಯ ಮೀಸಲಾತಿ ವಿರೋಧಿಗಳು ಎಂದರು.

ಅವತ್ತು ಮೀಸಲಾತಿ ವಿರೋಧಿಸಿದ್ದ ಜೋಯಿಸ್ ನಡೆ ಬಗ್ಗೆ ಅನಂತ್ ಕುಮಾರ್ ,ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರು ಪ್ರಶ್ನಿಸಬೇಕಾಗಿತ್ತಲ್ಲ ಏಕೆ ಮಾಡಲಿಲ್ಲ ಎಂದು ಹೇಳಿದರು. ಇವತ್ತು ಹಿಂದುಳಿದ ವರ್ಗದ ಮೀಸಲಾತಿಗೆ ರಾಜಕೀಯ ಕುತ್ತು ಬಂದಿದೆ.ಹಿಂದುಳಿದ ವರ್ಗಗಳು ಎಚ್ಚೆತ್ತು ಕೊಳ್ಳಬೇಕು ಎಂದು ತಿಳಿಸಿದರು.

ಮನ್ ಕಿ ಬಾತ್ ನಲ್ಲಿ ಮಾತನಾಡೋ ಪ್ರಧಾನಿ ಮೋದಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಲಿ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನಿಮಗೆ ಬಹುಮತವಿದೆ. ಮಹಿಳೆಯರು ಈ ಬಗ್ಗೆ ಪ್ರಶ್ನೆ ಮಾಡಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next