Advertisement

ಕೇರಳದಲ್ಲಿ ಬಿಜೆಪಿ ಹರತಾಳ : ಸಾಮಾನ್ಯ ಜನಜೀವನ ಬಾಧಿತ

03:20 PM Dec 14, 2018 | Team Udayavani |

ತಿರುವನಂತಪುರ : ಇಂದು ಶುಕ್ರವಾರ ಬೆಳಗ್ಗಿನಿಂದ ಸಂಜೆಯ ತನಕದ ರಾಜ್ಯಾದ್ಯಂತದ ಹರತಾಳಕ್ಕೆ ಬಿಜೆಪಿ ನೀಡಿದ ಕರೆಯಿಂದಾಗಿ ಜನಜೀವನ ಬಾಧಿತವಾಯಿತು. 

Advertisement

ರಾಜ್ಯ ಸಾರಿಗೆ ಮತ್ತು ಖಾಸಗಿ ಬಸ್ಸುಗಳು ಇಂದು ಬಹುತೇಕ ರಸ್ತೆಗಿಳಿಯಲಿಲ್ಲ. ಅಂಗಡಿ, ಮುಂಗಟ್ಟು, ಹೊಟೇಲುಗಳು ಕೂಡ ಮುಚ್ಚಿದ್ದವು. 

ಶಬರಿಮಲೆ ವಿಷಯದಲ್ಲಿ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನಾ ತಾಣಕ್ಕೆ ಸಮೀಪ ನಿನ್ನೆ ಗುರುವಾರ 55ರ ಹರೆಯದ ವೇಣುಗೋಪಾಲನ್‌ ನಾಯರ್‌ ಆತ್ಮಾಹುತಿ ಮಾಡಿಕೊಂಡದ್ದನ್ನು ಅನುಸರಿಸಿ ಬಿಜೆಪಿ ಇಂದು ರಾಜ್ಯಾದ್ಯಂತದ ಹರತಾಳಕ್ಕೆ ಕರೆನೀಡಿತ್ತು.

ಶಬರಿಮಲೆ ವಿಷಯದಲ್ಲಿ ಪಿಣರಾಯಿ ವಿಜಯನ್‌ ನೇತೃತ್ವದ ರಾಜ್ಯ ಸರಕಾರ ಉದ್ಧಟತನ ತೋರಿಸುತ್ತಿರುವುದನ್ನು ಪ್ರತಿಭಟಿಸಿ ವೇಣುಗೋಪಾಲನ್‌ ನಾಯರ್‌ ಆತ್ಮಾಹುತಿ ಗೈದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next