Advertisement

ಬೆಂಗಳೂರು: ಮಳೆಯಿಂದ ಬೈಕ್ ಸ್ಕಿಡ್ ಆಗಿ ಕೆಳಕ್ಕೆ ಬಿದ್ದವನ ಮೇಲೆ ಹರಿದ ಟಿಪ್ಪರ್: ಸವಾರ ಸಾವು

01:16 PM Apr 20, 2022 | Team Udayavani |

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್‌ ಹರಿದ ಹಿನ್ನೆಲೆಯಲ್ಲಿ ಮೆಕ್ಯಾನಿಕ್‌ ಮೃತಪಟ್ಟಿರುವ ಘಟನೆ ಕಾರ್ಪೋರೆಷನ್‌ ಸರ್ಕಲ್‌ ಬಳಿಯ ಪಲ್ಲವಿ ಥಿಯೇಟರ್‌ ಬಸ್‌ ನಿಲ್ದಾಣದ ಬಳಿ ಸೋಮವಾರ ಮಧ್ಯರಾತ್ರಿ ನಡೆದಿದೆ.

Advertisement

ಸಿಟಿ ಮಾರುಕಟ್ಟೆಯ ಮೆಕ್ಯಾನಿಕ್‌ ಮೊಹಮ್ಮದ್‌ ಆಲಿ ಜಿನ್ನಾ (22) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಆತನ ಸ್ನೇಹಿತ ಮುಬಾರಕ್‌ ಅಹಮದ್‌ (20) ತೀವ್ರವಾಗಿ ಗಾಯ ಗೊಂಡು ನಗರದ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಚಿಂತಾಜಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿಗೆ ತಿಂಗಳಲ್ಲಿ ಮೂವರು ಸಾವು: ಯಮರೂಪಿ ಲಾರಿಗೆ ಇನ್ನೆಷ್ಟು ಬಲಿಯಾಗಬೇಕು?

ರಂಜಾನ್‌ ಹಬ್ಬಕ್ಕೆ ಶಿವಾಜಿನಗರದಲ್ಲಿ ಹೊಸಬಟ್ಟೆಗಳನ್ನು ತೆಗೆದುಕೊಂಡು ಸ್ಕೂಟರ್‌ನಲ್ಲಿ ಇವರಿಬ್ಬರೂ ಸಿಟಿ ಮಾರುಕಟ್ಟೆಗೆ ಮಧ್ಯರಾತ್ರಿ 12 ಗಂಟೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯದ ಪಲ್ಲವಿ ಥಿಯೇಟರ್‌ ಬಸ್‌ ನಿಲ್ದಾಣದ ಬಳಿ ಮಳೆಯಿಂದ ಮೋಟರ್‌ ಬೈಕ್‌ ಸ್ಕಿಡ್‌ ಆಗಿ ಕೆಳಗೆ ಬಿದ್ದಿದ್ದಾರೆ.

ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್‌ ಲಾರಿ ಹರಿದು ಮೊಹಮ್ಮದ್‌ ಆಲಿ ಜಿನ್ನಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮುಬಾರಕ್‌ ಅಹಮದ್‌ ಸೊಂಟದ ಭಾಗ ಛಿದ್ರವಾಗಿದೆ. ವಿಲ್ಸನ್‌ ಗಾರ್ಡನ್‌ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next