Advertisement

ಭರಮಸಾಗರ: ಸಾರಿಗೆ ಬಸ್ ನಲ್ಲಿ 4 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

07:29 PM Jul 31, 2023 | Team Udayavani |

ಭರಮಸಾಗರ: ದಾವಣಗೆರೆ ಯಿಂದ ಚಿತ್ರದುರ್ಗಕ್ಕೆ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ಸುಮಾರು 3,99,000ಲಕ್ಷ ರೂ.ಬೆಲೆ ಬಾಳುವ 107 ಗ್ರಾಂ ಬಂಗಾರದ ಒಡವೆಗಳನ್ನು ಕಳ್ಳರು ಅಪಹರಿಸಿರುವ ಘಟನೆ ಜು.29 ರಂದು ನಡೆದಿದೆ.

Advertisement

ಬಳ್ಳಾರಿ ಮೂಲದ ಇಟ್ಟಿಗೆ ವ್ಯಾಪಾರಿ ರಾಘವೇಂದ್ರ ಶೆಟ್ಟಿ ಅವರು ಮಗ ನಂದನ್, ಹೆಂಡತಿ ಲಕ್ಷ್ಮೀ ಅವರೊಂದಿಗೆ ಜು28 ರಂದು ದಾವಣಗೆರೆಗೆ ಮಾವನ ಮನೆಗೆ ಆಗಮಿಸಿ ಜು29 ರಂದು ವಾಪಾಸ್ ಬಳ್ಳಾರಿಗೆ ತೆರಳಲು ದಾವಣಗೆರೆ ಬಸ್ ನಿಲ್ದಾಣದಿಂದ ವಾಯುವ್ಯ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು.

ಬಸ್ ಭರಮಸಾಗರ ತಲುಪುವ ವೇಳೆಗೆ ಆಭರಣಗಳ ಬ್ಯಾಗ್ ಹಿಡಿದು ಕುಳಿತಿದ್ದ ರಾಘವೇಂದ್ರ ಶೆಟ್ಟಿ ಯವರು ಅನುಮಾನ ಬಂದು ಬ್ಯಾಗ್ ನಲ್ಲಿದ್ದ ಆಭರಣ ಗಳ ಪೆಟ್ಟಿಗೆ ಪರಿಶೀಲಿಸಿದಾಗ ಕಾಣೆ ಆಗಿತ್ತು. ಈ ಕುರಿತು ಆಭರಣಗಳ ಪೆಟ್ಟಿಗೆಯನ್ನು ಯಾರೋ ಕಳ್ಳರು ಅಪಹರಿಸಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚಿ ಕಳವು ಆದ ಒಡವೆಗಳನ್ನು ಹುಡುಕಿಕೊಡುವಂತೆ ರಾಘವೇಂದ್ರ ಶೆಟ್ಟಿ ಯವರು ಜು30 ರಂದು ಭರಮಸಾಗರ ಪೋಲಿಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next