Advertisement

ವಾಹನ ಪಂಕ್ಚರ್ ಮಾಡಲು ರಸ್ತೆ ಮಧ್ಯೆ ಮೊಳೆ ಸುರಿದ ಕಿಡಿಗೇಡಿಗಳು?

12:09 PM Jul 30, 2024 | Team Udayavani |

ಬೆಂಗಳೂರು: ಜಾಲಹಳ್ಳಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯ ಕುವೆಂಪು ವೃತ್ತದ ಕೆಳಸೇತುವೆ ರಸ್ತೆಯಲ್ಲಿ ನೂರಾರು ಸಣ್ಣ ಮೊಳೆಗಳು ಪತ್ತೆಯಾಗಿದ್ದು, ಇದರ ಹಿಂದೆ ಪಂಕ್ಚರ್‌ ಅಂಗಡಿಗಳ ಕೈವಾಡ ವಿರುವ ಸಾಧ್ಯತೆಯಿದೆ ಎಂದು ಸಾರ್ವಜನಿಕರು ಹಾಗೂ ಸಂಚಾರ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Advertisement

ಈ ಮಾರ್ಗದಲ್ಲಿ ಪದೇ ಪದೆ ವಾಹನಗಳ ಪಂಕ್ಚರ್‌ ಆಗುತ್ತಿತ್ತು. ಅದನ್ನು ಸಂಚಾರ ಪೊಲೀಸರು ಪರಿಶೀಲಿಸಿದಾಗ ರಸ್ತೆ ಹಾಗೂ ಪಾದಚಾರಿ ಮಾರ್ಗದಲ್ಲಿ ನೂರಾರು ಮೊಳೆಗಳು ಪತ್ತೆಯಾಗಿದ್ದವು. ಈ ಮೊಳೆಗಳನ್ನು ಸಂಚಾರ ಪೊಲೀಸರು ಹೆಕ್ಕಿ ರಸ್ತೆಯನ್ನು ಸ್ವತ್ಛಗೊಳಿಸಿದ್ದಾರೆ. ಈ ಸಂಬಂಧ ಜಾಲಹಳ್ಳಿ ಸಂಚಾರ ಠಾಣೆ ಪೊಲೀಸರು ಕೆಳಸೇತುವೆ ರಸ್ತೆ ಸ್ವತ್ಛತೆ ಹಾಗೂ ಸಂಗ್ರಹಿಸಿರುವ ಮೊಳೆಗಳ ಫೋಟೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅದಕ್ಕೆ ಹಲವು ನೆಟ್ಟಿಗರು ಪ್ರತಿ ಕ್ರಿಯಿಸಿದ್ದು, ಇದರ ಹಿಂದೆ ಪಂಕ್ಚರ್‌ ಅಂಗಡಿಗಳ ಕೈವಾಡವಿರುವ ಸಾಧ್ಯತೆ ಯಿದೆ. ಸಮೀಪದ ಸಿಸಿ ಕ್ಯಾಮೆರಾ ಪರಿಶೀಲಿಸುವಂತೆ ಸಂಚಾರ ಪೊಲೀಸರಿಗೆ ಸಲಹೆ ನೀಡಿದ್ದಾರೆ. ಯಾರೋ ಉದ್ದೇಶಪೂರ್ವಕವಾಗಿ ಮೊಳೆಗಳನ್ನು ರಸ್ತೆಯಲ್ಲಿ ಚೆಲ್ಲಿರುವಂತಿದೆ.

ಕುವೆಂಪು ವೃತ್ತದ ಸಮೀಪದ ದೇವಿನಗರದ ಬಳಿ ಇರುವ ಪಂಕ್ಚರ್‌ ಶಾಪ್‌ಗ್ಳ ಕೈವಾಡ ಇರುವ ಸಾಧ್ಯತೆಯಿದ್ದು, ಈ ಬಗ್ಗೆ ಸಮೀಪದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next