Advertisement

BPL‌ ಹಂತಕ್ಕೆ ಇಳಿದ ಅನುಕೂಲಸ್ಥರು! ಕಾನೂನಿನ ತೊಡಕು, ವ್ಯರ್ಥವಾಗುತ್ತಿರುವ ಆಸ್ತಿ ಹೂಡಿಕೆ

11:32 PM Mar 16, 2021 | Team Udayavani |

1995ರಲ್ಲಿ ಉಡುಪಿ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿತು. 1997ರಲ್ಲಿ ಜಿಲ್ಲೆ ಉದಯವಾದಾಗ ಉಡುಪಿಯು ಜಿಲ್ಲಾ ಕೇಂದ್ರವಾಯಿತು. ಆಗ ವಿದೇಶಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಮಂದಿ ನಿವೃತ್ತಿ ಬಳಿಕ ನೆಲೆ ಕಂಡುಕೊಳ್ಳಬಹುದೆಂದು ಉಡುಪಿ ಸುತ್ತಮುತ್ತ ನಿವೇಶನಗಳನ್ನು ಖರೀದಿಸಿದರು. ಈ ಸಂಖ್ಯೆ ಸುಮಾರು 20,000 ಇರಬಹುದು ಎಂಬ ಅಂದಾಜಿದೆ. ಇವರೆಲ್ಲರೂ ಈಗ ಕಾನೂನಿನ ಬಲೆಗೆ ಸಿಲುಕಿ ಅತ್ತ ಮನೆ ಕಟ್ಟಲೂ ಆಗದೆ ಇತ್ತ ಮಾರಾಟ ಮಾಡಲೂ ಆಗದೆ ಬಡತನದ ರೇಖೆಗೆ ಇಳಿದಿದ್ದಾರೆ.

Advertisement

ಉಡುಪಿ: ಉಡುಪಿ ಸುತ್ತಮುತ್ತ ಸುಮಾರು ಎರಡು ದಶಕಗಳ ಹಿಂದೆ ಹೂಡಿಕೆ ಮಾಡಿ ಆಸ್ತಿ ಖರೀದಿಸಿದವರು ಈಗ ಅದು ಪ್ರಯೋಜನಕ್ಕೆ ಬಾರದೆ ಬಡತನದ ಹಂತಕ್ಕೆ ಇಳಿದಿದ್ದಾರೆಂದರೆ ನಂಬುವುದು ಕಷ್ಟ, ಆದರೆ ಸತ್ಯ.

ಲೇಔಟ್‌, ಬಡಾವಣೆಗಳಲ್ಲಿ ಸಣ್ಣ ಸಣ್ಣ ಆಸ್ತಿ ಖರೀದಿಸಿ ಸಂತ್ರಸ್ತರಾದವರು ಮಧ್ಯಮ ವರ್ಗದವರು, ಅನಿವಾಸಿ ಭಾರತೀಯರು, ಸಣ್ಣಪುಟ್ಟ ಉದ್ಯೋಗಿಗಳು. ಭವಿಷ್ಯದಲ್ಲಿ ಹೂಡಿಕೆ ನೆರವಾಗಬಹುದು ಎಂಬುದು ಇವರ ಅಂದಾಜಾಗಿತ್ತು. ಇವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರಾಗಿ ಆರ್ಥಿಕ ಹೊಡೆತದಿಂದ ಕಂಗಾಲಾಗಿದ್ದಾರೆ.

ಇವರೆಲ್ಲರೂ ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಿದ ಭೂಮಿಯನ್ನು ಡೆವಲಪರ್ನಿಂದ ಖರೀ ದಿಸಿದ್ದರು. ಉಡುಪಿ ಸುತ್ತಮುತ್ತ ಕಾನೂನು ಸುವ್ಯವಸ್ಥೆ, ನೀರು, ವಿದ್ಯುತ್‌ ಧಾರಾಳ ಇದೆ ಎಂಬ ಕಾರಣಕ್ಕೆ ಆಸ್ತಿ ಖರೀದಿಸಿದ್ದರು. ಇದು ಕಾನೂನುಬದ್ಧವಾಗಿ ನೋಂದಣಿಯೂ ಆಗಿದೆ. ಆದರೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿರುವ ಕಾನೂನಿನಿಂದ ಇವರಿಗೆ ಮನೆ ಕಟ್ಟಲು ಅನುಮತಿ ಸಿಗುತ್ತಿಲ್ಲ. ನೋಂದಣಿಯಾಗು ವಾಗಲೇ ಜಿಲ್ಲಾಡಳಿತ ಸಮನ್ವಯಗೊಳಿಸಬೇಕಿತ್ತು. ಈಗ ನಾವೇನು ಮಾಡುವುದು ಎನ್ನುತ್ತಾರೆ ಸಂತ್ರಸ್ತರಾದ ತಾರಾನಾಥ ಹೆಗ್ಡೆ, ರಾಬರ್ಟ್‌ ಡಿ’ಸೋಜಾ, ರಮೇಶ್‌ ಪೈ ಮೊದಲಾದವರು.

ನಾವು ಇಷ್ಟು ದಿನ ಮರ್ಯಾದೆಯಿಂದ ಬದುಕಿದವರು. ಈಗ ಹಾಕಿದ ಬಂಡವಾಳ ಹೂಡಿಕೆ ಪ್ರಯೋಜನಕ್ಕೆ ಬಾರದಿದ್ದಾಗ ನಾವು ಇನ್ನೊಬ್ಬರಲ್ಲಿ ಕೈಚಾಚಲು ಆಗು ತ್ತದೆಯೆ? ಸಾವಿರಾರು ಮಂದಿ ಈ ಸ್ಥಿತಿ ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ತಾರಾನಾಥ ಹೆಗ್ಡೆ.

Advertisement

2012ರ ವರೆಗೆ ಅನಧಿಕೃತ ಲೇಔಟ್‌ (ರಸ್ತೆ, ಪಾರ್ಕಿಂಗ್‌ ಇತ್ಯಾದಿಗಳಿಗೆ ನಿಯಮಾವಳಿ ಪ್ರಕಾರ ಬಿಟ್ಟಿರದ ಲೇಔಟ್‌) ಕಾನೂನನ್ನು ಸರಕಾರ ಕಟ್ಟುನಿಟ್ಟಾಗಿ ಪಾಲಿಸಿರ ಲಿಲ್ಲ. ಬಳಿಕ ಒಮ್ಮೆಗೆ ಕಾನೂನನ್ನು ಬಿಗಿಗೊಳಿಸಿದ ಕಾರಣ ಮನೆ ಕಟ್ಟಲು ಹೊರಟವರಿಗೆ ಕಾನೂನು ಅಡ್ಡಿಯಾಗಿದೆ. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಯೇ ಇಂತಹ 7,000 ಅರ್ಜಿಗಳಿವೆ. ರಾಜ್ಯದಲ್ಲಿ ಸುಮಾರು 17 ಲಕ್ಷ ಕಡತಗಳಿವೆ. ಒಮ್ಮೆ ಉಚ್ಚ ನ್ಯಾಯಾಲಯದಲ್ಲಿ ಇದು ಇತ್ಯರ್ಥವಾದರೂ ಪ್ರಕರಣ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿದೆ. ಇದನ್ನು ಆದಷ್ಟು ಶೀಘ್ರ ಇತ್ಯರ್ಥಪಡಿಸುವ ಹೊಣೆಗಾರಿಕೆ ಈಗ ರಾಜ್ಯ ಸರಕಾರದ ಮೇಲಿದೆ. ಒಂದು ವೇಳೆ ಇದನ್ನು ಇತ್ಯರ್ಥಪಡಿಸಿದರೆ ಕೊರೊನಾ ಕಾಲಘಟ್ಟದಲ್ಲಿ ಆರ್ಥಿಕ ಹೊಡೆತ ಅನುಭವಿಸಿದ ಸರಕಾರಕ್ಕೂ ವರದಾನವಾಗುವ ಸಾಧ್ಯತೆ ಇದೆ.

ಆದಷ್ಟು ಶೀಘ್ರ ಇತ್ಯರ್ಥ
ಯಾರೋ ಮಾಡಿದ ತಪ್ಪಿಗೆ ಯಾರೋ ಕಷ್ಟ ಅನುಭವಿಸುತ್ತಿರುವುದು ಸತ್ಯ. ಪ್ರಸ್ತುತ ಸನ್ನಿವೇಶದಲ್ಲಿ ಸರ್ವೋಚ್ಚ ನ್ಯಾಯಾಲಯ ಪ್ರಕರಣ ಇತ್ಯರ್ಥಗೊಳಿಸದೆ ಬೇರೆ ದಾರಿ ಇಲ್ಲ. ರಾಜ್ಯ ಸರಕಾರ ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ ಮತ್ತು ಇದಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ತೆಗೆದುಕೊಂಡಿದೆ. ಆದಷ್ಟು ಶೀಘ್ರ ಪ್ರಕರಣ ಇತ್ಯರ್ಥವಾಗಿ ಹಿರಿಯ ನಾಗರಿಕರೂ ಸೇರಿದಂತೆ ಎಲ್ಲ ಸಂತ್ರಸ್ತರ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸವಿದೆ.

– ಕೆ.ರಾಘವೇಂದ್ರ ಕಿಣಿ, ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next