Advertisement

ಬೆಳಗಾವಿಯಲ್ಲಿ ಎಂಇಎಸ್‌ ಪುಂಡಾಟ: ಮಾತುಕತೆಗೆ ಹಿರಿಯರ ಸಮಿತಿ: ಡಾ|ಜೋಶಿ

01:32 AM Dec 21, 2021 | Team Udayavani |

ಉಡುಪಿ: ಬೆಳಗಾವಿಯಲ್ಲಿ ಎಂಇಎಸ್‌ ಪುಂಡಾಟ ಕೃತ್ಯ ದುರದೃಷ್ಟಕರ. ಸಂಘರ್ಷಕ್ಕಿಂತ ಸೌಹಾರ್ದತೆ ಮತ್ತು ಸಮ
ನ್ವಯತೆ ಮೇಲೆ ನಂಬಿಕೆ ಇಟ್ಟುಕೊಂಡಿರುವುದರಿಂದ ಎರಡೂ ಕಡೆ‌ಯವರನ್ನು ಕರೆದು ಮಾತುಕತೆ ನಡೆಸಲು ಸಾಮರ್ಥ್ಯವಿರುವ ಹಿರಿಯರ ಸಮಿತಿ ರಚಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಡಾ| ಮಹೇಶ್‌ ಜೋಶಿ ಹೇಳಿದರು.

Advertisement

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಮೂರ್ತಿ ಎಸ್‌.ಆರ್‌.ಬನ್ನೂರು ಮಠ ಹಾಗೂ ಲೆಫ್ಟಿನೆಂಟ್‌ ಜನರಲ್‌ ರಮೇಶ್‌ ಸೇರಿದಂತೆ ಪ್ರಮುಖರ ಸಮಿತಿ ರಚಿಸಿ, ಸಮಸ್ಯೆಗೆ ಪರಿಹಾರ ಕಂಡು
ಕೊಳ್ಳಲಾಗುವುದು. ಮುಂದೆ ಇಂತಹ ಘಟನೆ ಆಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಈ ಬಗ್ಗೆ ಸರಕಾರದ ಮೇಲೂ ಒತ್ತಡ ತರಲಾಗುವುದು ಎಂದರು.

ಬಾವುಟ ಸುಟ್ಟಿರುವುದುಘೋರ ಅಪರಾಧ
ನಮ್ಮ ಅಸ್ಮಿತೆ, ಧೈರ್ಯ ಹಾಗೂ ಸಂಸ್ಕೃತಿಯ ಸಂಕೇತವಾಗಿರುವ ಕನ್ನಡ ಭಾವುಟವನ್ನು ಸುಟ್ಟಿರುವುದು ಘೋರ ಅಪರಾಧವಾಗಿದೆ. ಇದನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದರು. ಘಟನೆ ಮರುಕಳಿಸಬಾರದು

ಶಿವಾಜಿ ಮಹಾರಾಜರು ಮರಾಠಿಗಳಿಗೆ ಸೀಮಿತರಲ್ಲ. ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನ ಮಾಡಿರುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಅವಮಾನವಾಗಿದೆ. ಇದನ್ನು ಖಂಡಿಸಬೇಕು ಎಂದರು.

ಸರಕಾರದ ಮೌನ ಸಹಿಸುವುದಿಲ್ಲ
ಬೆಳಗಾವಿ ಘರ್ಷಣೆ ಹಿನ್ನೆಲೆಯಲ್ಲಿ ಸರಕಾರ ಇನ್ನು ಮುಂದೆ ಕಠಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್‌ ಸರಕಾರದ ಕೈ ಬಲಪಡಿಸುವ ಕಾರ್ಯ ಮಾಡಲಿದೆ. ಆದರೆ ಸರಕಾರ ಮೌನ ವಹಿಸದೆ ಜವಾಬ್ದಾರಿಯುತವಾಗಿ ವರ್ತಿಸಬೇಕು. ಸಮಸ್ಯೆಗೆ ಪರಿಹಾರ ಇದ್ದೇ ಇದೆ. ಸಮಸ್ಯೆ ಪರಿಹಾರವಾಗಬೇಕಾದರೆ ಚಟುವಟಿಕೆಯಿಂದ ಕೂಡಿದ ಸರಕಾರ ಇರಬೇಕು. ಸಮಸ್ಯೆ ಉಂಟಾದರೆ ಅದನ್ನು ಬಗೆಹರಿಸಬೇಕು. ಕನ್ನಡ, ಕನ್ನಡಿಗರಿಗೆ, ಕರ್ನಾಟಕಕ್ಕೆ ಯಾವುದೇ ರೀತಿ ಧಕ್ಕೆಯಾದರೆ ಕನ್ನಡ ಪರಿಷತ್‌ ಬೀದಿಗೆ ಇಳಿದು ಹೋರಾಟ ನಡೆಸಲಿದೆ ಎಂದರು.

Advertisement

ಆ್ಯಪ್‌ ಮೂಲಕ ಚುನಾವಣೆಗೆ ಚಿಂತನೆ
ಮಂಗಳೂರು: ಕಸಾಪ ಅಧ್ಯಕ್ಷರ ಚುನಾವಣೆಯನ್ನು ಮುಂದಿನ ಅವಧಿಯಿಂದ ಮತಪತ್ರಗಳ ಬದಲಾಗಿ ಆ್ಯಪ್‌ ಮೂಲಕ ನಡೆಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಪೂರಕ ವ್ಯವಸ್ಥೆಯನ್ನು ಸಿದ್ಧಗೊಳಿಸಲಾಗುವುದು ಎಂದು ಕಸಾಪ ನೂತನ ಅಧ್ಯಕ್ಷ ಡಾ| ಮಹೇಶ್‌ ಜೋಶಿ ಹೇಳಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಸತ್ಯ ಶಾಂತ ಪ್ರತಿಷ್ಠಾನ ಸಹಯೋಗದಲ್ಲಿ ಸೋಮವಾರ ನಗರದ ತುಳು ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ, ಜನಪರ ಪರಿಷತ್‌ ಆಗಿ ಮಾಡುವ ಮೂಲಕ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುವುದು ಎಂದ ಅವರು, ಕನ್ನಡಿಗರಿಗೆ ಆದ್ಯತೆಯ ಮೇರೆಗೆ ಉದ್ಯೋಗ ಲಭಿಸಬೇಕು. ಅದೇ ರೀತಿ ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಎಂದವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷದಯಾನಂದ ಜಿ. ಕತ್ತಲಸಾರ್‌, ತುಳುವನ್ನು ಅಧಿಕೃತ ರಾಜ್ಯಭಾಷೆಯನ್ನಾಗಿ ಘೋಷಿಸುವಲ್ಲಿ ಮತ್ತು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಬೆಂಬಲವಾಗಿ ನಿಂತು ಸಹಕಾರ ನೀಡಬೇಕು ಎಂದು ಕೋರಿದರು.

ಕಸಾಪ ರಾಜ್ಯಾಧ್ಯಕ್ಷ ಡಾ| ಮಹೇಶ ಜೋಶಿ ಮತ್ತು ಜಿಲ್ಲಾಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್‌ ಅವರನ್ನು ಪರಿಷತ್‌ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸಮ್ಮಾನಿಸಿ ಅಭಿನಂದಿಸಿದರು.

ತುಳು ಅಧಿಕೃತ ರಾಜಭಾಷೆಗೆ ಬೆಂಬಲ
ಕನ್ನಡ- ತುಳು ಕೇವಲ ಭಾಷೆಗಳಲ್ಲ. ನಮ್ಮತನ, ನಮ್ಮ ಅಸ್ಮಿತೆಯ ಪ್ರತೀಕ. ತುಳುವನ್ನು ಬೆಳೆಸುವ ಜವಾಬ್ದಾರಿ ಯನ್ನು ಕನ್ನಡದವರು ಹಾಗೂ ಕನ್ನಡವನ್ನು ಬೆಳೆಸುವ ಜವಾಬ್ದಾರಿಯನ್ನು ತುಳುವರು ತೆಗೆದುಕೊಳ್ಳಬೇಕು. ತುಳು ಭಾಷೆರಾಜ್ಯದ ಅಧಿಕೃತ ಭಾಷೆಯಾಗುವುದರ ಜತೆಗೆ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎನ್ನುವ ಬೇಡಿಕೆಗೆ ಕಸಾಪ ಬೆಂಬಲವಾಗಿ ನಿಲ್ಲುತ್ತದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next