Advertisement

BBK11: ವಂಚನೆ ಪ್ರಕರಣ ನೆನೆದು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ!

10:03 PM Oct 04, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಕನ್ನಡ -11(Bigg Boss Kannada) ದ ದೊಡ್ಮನೆಯಲ್ಲಿ ಸ್ಪರ್ಧಿಗಳಿಗೆ ಪ್ರತಿದಿನ ಟಾಸ್ಕ್ ನೀಡಲಾಗುತ್ತಿದೆ. ಸ್ವರ್ಗ- ನರಕದ ಎರಡೂ ಮನೆಮಂದಿಗೆ ಈ ಟಾಸ್ಕ್ ಗಳು ಮಹತ್ವದಾಗಿದೆ.

Advertisement

ಎರಡು ದಿನ ಜಗದೀಶ್ ಅವರ ಅಬ್ಬರದಲ್ಲಿ ಸದ್ದು ಮಾಡಿದ್ದ ಬಿಗ್ ಬಾಸ್ ಮನೆಯಲ್ಲಿ ಈಗ ಸ್ಪರ್ಧಿಗಳ ಭಾವುಕರಾಗುತ್ತಿದ್ದಾರೆ. ಕೆಲವರು ಚುಚ್ಚು ಮಾತಿನಿಂದ ಭಾವುಕರಾಗುತ್ತಿದ್ದು, ಇನ್ನು ಕೆಲವರು ಹಳೆಯ ಘಟನೆಗಳನ್ನು ನೆನೆದು ಭಾವುಕರಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ನವರಾತ್ರಿ ಪೂಜೆ ನಡೆದಿದೆ. ಪೂಜೆಯಲ್ಲಿ ಎರಡೂ ಮನೆಯವರು ಭಾಗಿಯಾಗಿದ್ದಾರೆ. ಈ ಸಮಯದಲ್ಲಿ ಚೈತ್ರಾ ಕುಂದಾಪುರ ಅವರು ಭಾವುಕರಾಗಿದ್ದಾರೆ.

ನಾನ ಸಲಿ ಇಲ್ಲಿದ್ದೇನೆ. ಕಳೆದ ವರ್ಷ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಜೈಲಿನಲ್ಲಿದ್ದೆ ಎಂದು ಚೈತ್ರಾ ಅವರು ಹಿಂದಿನ ಘಟನೆಗಳ ಬಗ್ಗೆ ನೆನೆದು ಕಣ್ಣೀರಿಟ್ಟಿದ್ದಾರೆ. ಅವರಿಗೆ ಇತರೆ ಸ್ಪರ್ಧಿಗಳು ಸಮಾಧಾನಪಡಿಸಿ, ಧೈರ್ಯ ತುಂಬಿದ್ದಾರೆ.

ಕಳೆದ ಕೆಲ ಸಮಯದ ಹಿಂದಷ್ಟೇ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next