Advertisement

BBK11: ಇಡೀ ಬಿಗ್ ಬಾಸ್ ಮನೆಗೆ ಆತಂಕ ತಂದ ಆ ಒಂದು ಕರೆ… ಮಾಡಿದ್ಯಾರು…?

08:35 AM Oct 14, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada-11) ಮೂರನೇ ವಾರಕ್ಕೆ ಕಾಲಿಟ್ಟಿದೆ. ದಿನ ಮುಂದೆ ಸಾಗುತ್ತಿದ್ದಂತೆ 11ರ ಬಿಗ್‌ ಬಾಸ್‌ನಲ್ಲಿ ಹೊಸ ಅಧ್ಯಾಯದಲ್ಲಿ ಹೊಸ ಟ್ವಿಸ್ಟ್‌ ಗಳು ಶುರುವಾಗುತ್ತಿದೆ.

Advertisement

ಆರಂಭದಲ್ಲಿ ಸ್ವರ್ಗ ಹಾಗೂ ನರಕ ಎಂಬ ಕಾನ್ಸೆಪ್ಟ್‌ ನಲ್ಲಿ ಬಿಗ್‌ ಬಾಸ್‌ ಮನೆ ಎರಡಾಗಿತ್ತು. ಈಗ ಒಂದು ಮನೆಯಲ್ಲೇ ಸ್ಪರ್ಧಿಗಳಿದ್ದು,ಒಂದೇ ಮನೆಯಲ್ಲಿ ಸ್ಪರ್ಧಿಗಳು ಒಗ್ಗಟ್ಟಿನಲ್ಲಿರುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇಲ್ಲೂ ಕೂಡ ಸ್ಪರ್ಧಿಗಳ ನಡುವೆ ಮಾತು ಮಾತಿಗೆ ಜಗಳ ಉಂಟಾಗುತ್ತಿದೆ.
ಕಳೆದ ಬಿಗ್‌ ಬಾಸ್‌ ಮನೆಯಿಂದ ಯಾರೂ ಕೂಡ ಎಲಿಮಿನೇಷನ್‌ ಆಗಿಲ್ಲ. ಆದರೆ ಈ ವಾರ ಎಲಿಮಿನೇಷನ್‌ ಇರಲಿದೆ. ಬಿಗ್‌ ಬಾಸ್‌ ಆರಂಭದಿಂದಲೂ ಸ್ಪರ್ಧಿಗಳ ನಡುವೆ ನಾನಾ ವಿಚಾರಕ್ಕೆ ಕಿತ್ತಾಟ ಶುರುವಾಗಿದೆ.

ದೊಡ್ಮನೆಗೆ ಮನೆಗೆ ಬೆಳ್ಳಂಬೆಳಗ್ಗೆ ಬಿಗ್‌ ಬಾಸ್‌ ಕರೆ ಮಾಡಿದ್ದಾರೆ. “ಇದು ಬಿಗ್‌ ಬಾಸ್‌ ನಿಮ್ಮೆಲ್ಲರ ವರ್ತನೆಯಿಂದ ನನಗೆ ತುಂಬಾ ನೋವಾಗಿದೆ. ಥ್ಯಾಂಕ್ಯೂ ವೆರಿಮಚ್.‌ ಉಡಾಫೆತನ, ಅಪ್ರಾಮಾಣಿಕತನ ನಡವಳಿಕೆಯಿಂದ ಬೇಸತ್ತು ಈ ಕ್ಷಣದಿಂದ ಬಿಗ್ ಬಾಸ್‌ ಈ ಮನೆಯಲ್ಲಿ ಇರಲ್ಲ. ನಾನು ಬ್ರೇಕ್‌ ತೆಗೆದುಕೊಳ್ಳುತ್ತಿದ್ದೇನೆ” ಎಂದು ಬಿಗ್‌ ಬಾಸ್‌ ಕಾಲ್‌ ಮಾಡಿ ಹೇಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

Advertisement

ಬಿಗ್‌ ಬಾಸ್‌ ಕರೆ ರಿಸೀವ್‌ ಮಾಡಿದ ಕ್ಯಾಪ್ಟನ್‌ ಶಿಶಿರ್‌ ಈ ವಿಚಾರ ಕೇಳಿ ಶಾಕ್‌ ಆಗಿದ್ದು, ಇತರೆ ಸ್ಪರ್ಧಿಗಳು ಏನಾಗಿದೆ ಎನ್ನುವುದರ ಬಗ್ಗೆ ಯೋಚನೆ ಮಾಡತೊಡಗಿದ್ದಾರೆ.

ಇಂದು (ಅ.14) ರಾತ್ರಿ ಈ ಸಂಚಿಕೆ ಪ್ರಸಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next